ದೆಹಲಿ, ಜೂ. 18 (DaijiworldNews/AA): ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಪ್ರತಿಯೊಬ್ಬ ಅಭ್ಯರ್ಥಿಯು ಐಪಿಎಸ್, ಐಎಎಸ್, ಐಎಫ್ಎಸ್ ಅಧಿಕಾರಿಯಾಗುವ ಕನಸು ಹೊಂದಿರುತ್ತಾರೆ. ಹೀಗೆ ಐಎಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ನನಸಾಗಿಸಿಕೊಂಡ ಅನು ಬೇನಿವಾಲ್ ಅವರ ಯಶೋಗಾಥೆ ಇದು.

ದೆಹಲಿಯ ಪಿತಾಂಪುರ ಪ್ರದೇಶದಲ್ಲಿ ಜನಿಸಿದ ಅನು ಬೇನಿವಾಲ್ ಸಾಧಾರಣ ಕುಟುಂಬದಲ್ಲಿ ಬೆಳೆದರು. ಆರ್ಥಿಕ ತೊಂದರೆಗಳಿಂದಾಗಿ ಅವರ ತಂದೆಗೆ ತಮ್ಮ ಸ್ವಂತ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ, ಆದರೆ ತಮ್ಮ ಮಕ್ಕಳು ಅದೇ ವಿಧಿಯನ್ನು ಎದುರಿಸಬಾರದು ಎಂದು ಅವರು ದೃಢನಿಶ್ಚಯದಿಂದ ಇದ್ದರು.
ಅನು ಬೇನಿವಾಲ್ ಅವರ ತಾಯಿ ಕುಟುಂಬವನ್ನು ಪೋಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು, ಮನೆಯ ಖರ್ಚುಗಳನ್ನು ಪೂರೈಸಲು ಮತ್ತು ಅನುವಿನ ಅಧ್ಯಯನಕ್ಕೆ ಹಣಕಾಸು ಒದಗಿಸಲು ಮನೆಯಲ್ಲಿ ಸೂಟ್ಗಳನ್ನು ಹೊಲಿಯುತ್ತಿದ್ದರು.
ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಅನು, ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿಗೆ ಸೇರುವ ಮೊದಲು ದೆಹಲಿಯಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರು ಬಿಎಸ್ಸಿ ಪದವಿ, ನಂತರ ಎಂಎಸ್ಸಿ ಪದವಿ ಮತ್ತು ನಂತರ ಕೆಲವು ವರ್ಷಗಳ ಕಾಲ ನ್ಯಾನೊಸೈನ್ಸ್ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಿದರು. ತನ್ನ ಶೈಕ್ಷಣಿಕ ಮತ್ತು ಸಂಶೋಧನಾ ಕಾರ್ಯವನ್ನು ಪೂರ್ಣಗೊಳಿಸಿದ ನಂತರ ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ.
ಅನು ಅವರು ಯುಪಿಎಸ್ಸಿ ಪರೀಕ್ಷೆಗೆ ಭೂಗೋಳವನ್ನು ಐಚ್ಛಿಕ ವಿಷಯವಾಗಿ ಆರಿಸಿಕೊಂಡರು. ಅನು ಅವರು ತಮ್ಮ ಮೊದಲ ಎರಡು ಪ್ರಯತ್ನಗಳಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗುತ್ತಾರೆ. ಆದರೆ ದೃತಿಗೆಡದೆ ಮೂರನೇ ಬಾರಿಗೆ ಪರೀಕ್ಷೆ ಬರೆದ ಅವರು 638 ನೇ ಅಖಿಲ ಭಾರತ ರ್ಯಾಂಕ್ ಪಡೆದರು.
ಆದರೆ ಅನು ಅವರು 2022 ರಲ್ಲಿ ನಾಲ್ಕನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ. ಈ ಬಾರಿ ಅವರು 2017 ರ ಅಖಿಲ ಭಾರತ ರ್ಯಾಂಕ್ ನೊಂದಿಗೆ ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾಗುತ್ತಾರೆ. ಐಪಿಎಸ್ ಅನು ಬೆನಿವಾಲ್ ಅವರು ಪ್ರಸ್ತುತ ಗ್ವಾಲಿಯರ್ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.