ನವದೆಹಲಿ, ಏ. 27(DaijiworldNews/AA): ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಆರೋಗ್ಯ ಉತ್ತಮವಾಗಿದೆ. ಈಗಾಗಲೇ ನೀಡಿರುವ ಔಷಧಿಗಳನ್ನೇ ಅವರು ಮುಂದುವರಿಸಲಿ ಎಂದು ಏಮ್ಸ್ನ ತಜ್ಞ ವೈದ್ಯರ ತಂಡ ಹೇಳಿದೆ.
![](https://daijiworld.ap-south-1.linodeobjects.com/Linode/img_tv247/AA-180424-kejrival.jpg)
ದೆಹಲಿ ಕೋರ್ಟ್ ನ ನಿರ್ದೇಶನದ ಮೇರೆಗೆ ಐದು ಸದಸ್ಯರ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿತ್ತು. ಈ ಮಂಡಳಿಯು ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಜ್ರಿವಾಲ್ ಅವರ ಆರೋಗ್ಯ ತಪಾಸಣೆ ನಡೆಸಿದೆ. ತಿಹಾರ್ ಜೈಲಿನ ಇಬ್ಬರು ವೈದ್ಯರು ಕೂಡ ಭಾಗವಹಿಸಿದ್ದು, ಸುಮಾರು ಅರ್ಧ ಗಂಟೆ ಕಾಲ ತಪಾಸಣೆ ನಡೆಸಲಾಗಿತ್ತು.
ಇನ್ನು ತಪಾಸಣೆ ಬಳಿಕ ಕೇಜ್ರಿವಾಲ್ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಅವರು ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧಿಗಳನ್ನು ಮುಂದುವರಿಸಲಿ. ಜೈಲಿನಲ್ಲಿ 2 ಯೂನಿಟ್ ಇನ್ಸುಲಿನ್ ಡೋಸ್ ಅನ್ನು ಮುಂದುವರಿಸುವಂತೆ ಏಮ್ಸ್ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.