ಬೆಂಗಳೂರು, ಜೂ. 03 (DaijiworldNews/AA): "ಈಗಲೇ ಕಪ್ ನಮ್ದೇ ಅಂತ ಹೇಳಬೇಡಿ. ಗೆದ್ದ ಮೇಲೆ ಹೇಳೋಣ" ಎಂದು ಆರ್ಸಿಬಿ ಮಾಜಿ ನಾಯಕ ಅನಿಲ್ ಕುಂಬ್ಳೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆರ್ಸಿಬಿ ತಂಡ ಚೆನ್ನಾಗಿ ಆಡುತ್ತಿದೆ. ಎರಡು ಬೆಸ್ಟ್ ತಂಡಗಳು ಫೈನಲ್ ಪ್ರವೇಶಿಸಿವೆ. ನಾನು ಎರಡು ತಂಡವನ್ನು ಪ್ರತಿನಿಧಿಸಿದ್ದೆ. ಆರ್ಸಿಬಿ ಗೆಲ್ಲಬೇಕೆಂದು ನಾನು ಹಾರೈಸುತ್ತೇನೆ" ಎಂದರು.
"ಕೊಹ್ಲಿ ಉತ್ತಮವಾಗಿ ಆಡುತ್ತಿದ್ದು 600ಕ್ಕೂ ಅಧಿಕ ರನ್ ಹೊಡೆದಿದ್ದಾರೆ. ಸಂತೋಷದ ಸುದ್ದಿ ಏನೆಂದರೆ ಈ ಬಾರಿ ಹೊಸ ಐಪಿಎಲ್ ವಿನ್ನರ್ ಆಗುತ್ತಾರೆ. ಆರ್ಸಿಬಿ ಉತ್ತಮವಾಗಿ ಆಡುತ್ತಿದೆ. ಫೈನಲಿನಲ್ಲಿ ಆರ್ಸಿಬಿ ಗೆಲ್ಲಬೇಕು" ಎಂದು ಹೇಳಿದರು.
ಐಪಿಎಲ್ ಸೀಸನ್-18ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಫೈನಲ್ ಪಂದ್ಯ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಚೊಚ್ಚಲ ಟ್ರೋಫಿಗಾಗಿ ಸೆಣಸಲಿವೆ.