ಢಾಕಾ, ಫೆ. 17 (DaijiworldNews/AK): ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ ಮುಖ್ಯಸ್ಥ ತಾರೀಖ್ ರೆಹಮಾನ್ ಬಾಂಗ್ಲಾ ಪ್ರಧಾನಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಢಾಕಾದ ಜತಿಯಾ ಸಂಗ್ಸದ್ ಭಬನ್ನ ದಕ್ಷಿಣ ಪ್ಲಾಜಾದಲ್ಲಿ ರೆಹಮಾನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಹೊಸ ಕ್ಯಾಬಿನೆಟ್ ಘೋಷಿಸಿದ್ದು, 25 ಸಚಿವರು ಮತ್ತು 24 ರಾಜ್ಯ ಸಚಿವರನ್ನು ನಾಮನಿರ್ದೇಶನ ಮಾಡಲಾಗಿದೆ. ತಾರೀಖ್ ಜೊತೆಗೆ ಹಿಂದೂ ಸಂಸದ ನಿತೈ ರಾಯ್ ಮತ್ತು ಓರ್ವ ಬೌದ್ಧ ಧರ್ಮೀಯ ಸಂಸದ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಈ ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಭಾರತದ ಪರವಾಗಿ ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಫ್ರಾನ್ಸ್ ಅಧ್ಯಕ್ಷರ ಪ್ರವಾಸ ಮೊದಲೇ ನಿಗದಿಯಾಗಿದ್ದರಿಂದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸಲು ಓಂ ಬಿರ್ಲಾ ಅವರನ್ನು ಕಳುಹಿಸಲಾಗಿತ್ತು.