ಗಂಗೊಳ್ಳಿ, ಜ.08 (DaijiworldNews/AA): ದುರಸ್ತಿಗೆಂದು ಹೋಗಿದ್ದ ಮಲ್ಪೆ ಬಂದರಿನ ಮೀನುಗಾರಿಕಾ ದೋಣಿಗೆ ಗಂಗೊಳ್ಳಿ ಅಳಿವೆ ಸಮೀಪ ಮರದ ದಿಮ್ಮಿ ಜನವರಿ 4ರಂದು ಡಿಕ್ಕಿ ಹೊಡೆದು ಭಾಗಶಃ ಮುಳುಗಡೆಯಾಗಿ 65 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ.

ಸಂಜಾತ ಅವರ ಒಡೆತನದ ತವಕಲ್ ಎಂಬ ಹೆಸರಿನ ಮೀನುಗಾರಿಕೆ ದೋಣಿಯನ್ನು ಜ. 4ರಂದು ಸಂಜೆ 5.30ಕ್ಕೆ ಮೀನುಗಾರರಾದ ರವಿ ಸಾಲ್ಯಾನ್ ಮತ್ತು ಹರೀಶ್ ಅವರು ಮಲ್ಪೆ ಬಂದರಿನಿಂದ ಗಂಗೊಳ್ಳಿಗೆ ದುರಸ್ತಿಗಾಗಿ ಮೀನುಗಾರರಾದ ರವಿ ಸಾಲಿಯಾನ್ ಮತ್ತು ಹರೀಶ್ ಎಂಬುವರು ತೆಗೆದುಕೊಂಡು ಹೋಗುತ್ತಿದ್ದರು.
ಗಂಗೊಳ್ಳಿಯಿಂದ ಸಂಜೆ 7.30ರ ಸುಮಾರಿಗೆ ಎರಡು ನಾಟಿಕಲ್ ಮೈಲು ದೂರದಲ್ಲಿ ಸಾಗುತ್ತಿದ್ದಾಗ ದೊಡ್ಡ ಮರದ ದಿಮ್ಮಿ ದೋಣಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೋಟ್ನ ಮುಂಭಾಗದ ಕೆಳಭಾಗಕ್ಕೆ ಹಾನಿಯಾಗಿ ನೀರು ನುಗ್ಗಿದ್ದು, ನೀರಿನ ಒಳ ಹರಿವು ಹೆಚ್ಚಾಗಿ ಬೋಟು ಮುಳುಗುವ ಸಂಭವ ಇರುವುದನ್ನು ಗಮನಿಸಿದ ಬೋಟಿನ ತಾಂಡೇಲ ರವಿ ಸಾಲ್ಯಾನ್ ಅವರು ದುರಸ್ತಿ ಕೆಲಸ ಮಾಡುವ ಗಂಗೊಳ್ಳಿ ಪುಂಡಲೀಕ ಹರಾಟೆ ಅವರನ್ನು ಸಂಪರ್ಕಿಸಿದಾಗ ಅವರು ಜಲರಾಣಿ ಎಂಬ ಹೆಸರಿನ ಬೋಟನ್ನು ಸಹಾಯಕ್ಕಾಗಿ ಕಳುಹಿಸಿದರು. ದೋಣಿಗೆ ಹಾನಿಯಾಗಿ ಸುಮಾರು 65 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.