ಮಂಗಳೂರು,ಜ.25(DaijiworldNews/TA): ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿ ಅವರ ಜನ್ಮ ಶತಾಬ್ಧಿ ಆರಾಧನಾ ಮಹೋತ್ಸವದ ಅಂಗವಾಗಿ ಶತನಮನ ಶತಸ್ಮರಣ ಎಂಬ ಕಾರ್ಯಕ್ರಮ ನಗರದ ಕಾರ್ಸ್ಟ್ರೀಟ್ ವೆಂಕಟರಮಣದೇವಸ್ಥಾನದಲ್ಲಿ ಜ.30ರ ವರೆಗೆ ಆಯೋಜಿಸಲಾಗಿದೆ.




ಗುರುಸ್ಮರಣೆಯ ಹಿನ್ನೆಲೆಯಲ್ಲಿ ನಾನಾ ರೀತಿಯಸಾಂಸ್ಕೃತಿಕಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜ. 26ರಂದು ಸಂಜೆ6.00 ಗಂಟೆಗೆಜಿಎಸ್ಬಿ ಸಮಾಜದ 100 ಗಾಯಕರು ಏಕ ಕಾಲದಲ್ಲಿದೇವಸ್ಥಾನದ ಮುಂಭಾಗದಲ್ಲಿ ಹಾಕಿರುವ ಭವ್ಯ ವೇದಿಕೆಯಲ್ಲಿ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿ ಶತನಮನ -ಶತಸ್ಮರಣ ಎಂಬ ಗಾಯನಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಈ ಗಾಯನಕಾರ್ಯಕ್ರಮದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿಅವರಕುರಿತುರಚಿಸಿರುವ ಗೀತೆಗಳನ್ನು 100 ಕಲಾವಿದರುಭಕ್ತಿ ಭಾವ ಪೂರ್ವಕವಾಗಿಏಕಕಾಲದಲ್ಲಿ ಹಾಡಲಿದ್ದಾರೆ. ಜ.27ರಂದು ಸಂಜೆ 6ರಿಂದ ಪ್ರತಿಭಾನ್ವಿತಯುವಗಾಯಕಿಸೂರ್ಯಗಾಯತ್ರಿ ಮತ್ತುತಂಡದವರಿAದ ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಲಿದೆ. ಜ.28ರಂದು ಪ್ರತಿಭಾನ್ವಿತಯುವಕಲಾವಿದಅಂಕುಶ್ಎನ್. ನಾಯಕ್ಅವರಿಂದ ಸಿತಾರ್ ವಾದನ ನಡೆಯಲಿದೆ. ಬಳಿಕ ಹೆಸರಾಂತಗಾಯಕರಾದಪುತ್ತೂರು ನರಸಿಂಹ ನಾಯಕ್ಅವರಿಂದ ಸುಧೀಂದ್ರ ಸ್ಮರಣ ಎಂಬ ಗಾಯನಕಾರ್ಯಕ್ರಮನಡೆಯಲಿದೆ. ಈ ಕಾರ್ಯಕ್ರಮದಲ್ಲಿನರಸಿಂಹ ನಾಯಕ್ಅವರು ಸ್ವಾಮೀಜಿಕುರಿತ ಹಾಡುಗಳನ್ನು ಪ್ರಸ್ತುತ ಪಡಿಸಲಿದ್ದಾರೆ.
ಜ. 29ರಂದು ಸಂಜೆ 6ಕ್ಕೆ ಪದ್ಮಶ್ರೀ ಪುರಸ್ಕೃತ, ಕಂಚಿನಕಂಠದ ಧಾರವಾಡದ ಪಂಡಿತ್ವೆಂಕಟೇಶ್ಕುಮಾರ್ ಅವರಿಂದ ದಾಸವಾಣಿಕಾರ್ಯಕ್ರಮ ನಡೆಯಲಿದೆ. ಜ. 30ರಂದು ಸಂಜೆ 6ಕ್ಕೆ ಹುಬ್ಬಳ್ಳಿಯ ಪಂಡಿತ್ಜಯತೀರ್ಥ ಮೇವುಂಡಿ ಮತ್ತುಪುಣೆಯ ನಾಗೇಶ್ ಅಡ್ಗಾಂವ್ಕರ್ ಜುಗಲ್ ಬಂಧಿ ನಡೆಯಲಿದೆ. ಭಕ್ತಾಭಿಮಾನಿಗಳು ಈ ವಿಶೇಷ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.