ಸುಳ್ಯ,ಮಾ.03(DaijiworldNews/TA): ಕಸಬಾಮೂಲೆ ಜೂನಿಯರ್ ಕಾಲೇಜು ಬಳಿ ಸುಳ್ಯ ಶ್ರೀ ಸಂಚಾರಿ ಗುಳಿಗ ದೈವದ ನೇಮೋತ್ಸವವು ರಾತ್ರಿ ನಡೆಯಿತು. ಬೆಳಗ್ಗೆ ಗಣಹೋಮ, ತಂಬಿಲ ಸೇವೆ ನಡೆಯಿತು. ಸಂಜೆ ಶ್ರೀ ದೈವದ ಭಂಡಾರ ತೆಗೆಯಲಾಯಿತು. ನಂತರ ಶ್ರೀ ದೈವಕ್ಕೆ ಎಣ್ಣೆ ವೀಳ್ಯ ನೀಡಲಾಯಿತು. ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ನಂತರ ಶ್ರೀ ಸಂಚಾರಿ ಗುಳಿಗ ದೈವದ ನೇಮೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಸಂಚಾರಿ ಗುಳಿಗ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಸಂಕಪ್ಪ ಗೌಡ ನೀರ್ಪಾಡಿ, ಅಧ್ಯಕ್ಷ ರಘುನಾಥ ಶೆಟ್ಟಿ,ಉಪಾಧ್ಯಕ್ಷ ನೋಣಪ್ಪ ಗೌಡ ಕಲ್ಕುದಿ,ಕಾರ್ಯದರ್ಶಿ ಮುರಳಿ ಮಾವಂಜಿ, ಜತೆ ಕಾರ್ಯದರ್ಶಿ ಲವ ಕುಮಾರ್ ಕನ್ನಡ್ಕ, ಕೋಶಾಧಿಕಾರಿ ಮಹಾಲಿಂಗನ್ ಬಾರ್ಜ ತೊಟ್ಟಿ, ನಿರ್ದೇಶಕ ದಿನೇಶ್ ಕುಮಾರ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.