ಬೈಂದೂರು, ಜೂ. 05 (DaijiworldNews/AA): ಸುಮಾರು ಹತ್ತು ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿದ ಘಟನೆ ಯಡ್ತರೆ ಜಂಕ್ಷನ್ ಬಳಿ ಜೂನ್ 5ರ ಮುಂಜಾನೆ ನಡೆದಿದೆ.



ಭಟ್ಕಳದ ನವಾಯತ್ ಕಾಲೋನಿ ನಿವಾಸಿ ಅಬ್ರಾರುಲ್ ಹಕ್ ಮೋಮಿನ್ (30), ಕೋಗ್ತಿ ಭಟ್ಕಳದ ಗಾಂಧಿನಗರ 2ನೇ ಕ್ರಾಸ್ ಬಂದರ್ ರಸ್ತೆಯ ನಿವಾಸಿ ಮೊಹಮ್ಮದ್ ಹಾಗೂ ಭಟ್ಕಳದ ಮೊಹಮ್ಮದ್ ಆರೀಫ್ ಬಂಧಿತ ಆರೋಪಿಗಳು.
ಈ ಘಟನೆ ಮುಂಜಾನೆ 3.30 ರ ಸುಮಾರಿಗೆ ಸಂಭವಿಸಿದೆ. ಕೊಲ್ಲೂರು ಕಡೆಯಿಂದ ಭಟ್ಕಳಕ್ಕೆ ತೆರಳುತ್ತಿದ್ದ ವಾಹನದಲ್ಲಿ ಅಕ್ರಮವಾಗಿ 10 ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಆ ವಾಹನವನ್ನು ಪೊಲೀಸರು ತಡೆಹಿಡಿದಿದ್ದು, ಇದರೊಂದಿಗೆ ಬೆಂಗಾವಲಾಗಿ ಹೋಗುತ್ತಿದ್ದ ಶಂಕಿತ ಮತ್ತೊಂದು ವಾಹನವನ್ನೂ ವಶಪಡಿಸಿಕೊಂಡಿಸಿಕೊಂಡಿದ್ದಾರೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿದುಬಂದಿದೆ.