ಉಡುಪಿ, ಜೂ. 22 (DaijiworldNews/AA): ವಿದ್ಯಾರ್ಥಿ ಪ್ರತಿಭೆಗಳನ್ನು ಸದಾ ಪ್ರೋತ್ಸಾಹಿಸಿ, ಅವರ ಪ್ರತಿಭಾ ಪ್ರದರ್ಶನಕ್ಕೆ ವಿವಿಧ ಕಾರ್ಯಕ್ರಗಳ ಮೂಲಕ ಅವಕಾಶವನ್ನು ಒದಗಿಸಿ, ಈಗಾಗಲೇ ದಾಯ್ಜಿ ಅಂತ್ಯಾಕ್ಷರಿ ಮತ್ತು ಚಾಣಾಕ್ಷ ಚಾಲೆಂಜ್ ಎಂಬ ಎರಡು ವಿಭಿನ್ನ ಕಾರ್ಯಕ್ರಮಗಳ ಮೂಲಕ ಮನಗೆದ್ದಿರುವ ದಾಯ್ಜಿವರ್ಲ್ಡ್ ಉಡುಪಿ ಸ್ಟುಡಿಯೋ ಮತ್ತು ಕಿಶೂ ಎಂಟರ್ ಪ್ರೈಸಸ್ ವತಿಯಿಂದ ಪ್ರೌಡಶಾಲಾ ವಿದ್ಯಾರ್ಥಿಗಳಿಗಾಗಿ ಮತ್ತೊಂದು ವಿಶೇಷ ಕಾರ್ಯಕ್ರಮ "ಅಭಿವ್ಯಕ್ತ", ಭಾಷಣ ಸ್ಪರ್ಧೆಯನ್ನು ಆಯೋಜಿಸುತ್ತಿದೆ.


"ಅಭಿವ್ಯಕ್ತ" ಭಾಷಣ ಸ್ಪರ್ಧೆಯು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದು, ಉಡುಪಿ – ದಕ್ಷಿಣ ಕನ್ನಡ ಜಿಲ್ಲೆಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಲು ಮುಕ್ತ ಅವಕಾಶ ಇದೆ. "ಅಭಿವ್ಯಕ್ತ" ಭಾಷಣ ಸ್ಪರ್ಧೆಯ ಮೂಲಕ ಭಾಷಣ ಕಲೆಯಲ್ಲಿ ಇಚ್ಛೆ ಇರುವ ವಿದ್ಯಾರ್ಥಿಗಳಿಗೆ ಒಂದು ವೇದಿಕೆ ಒದಗಿಸುವ ಕಾರ್ಯ ನಡೆಯಲಿದೆ. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಸಾರ್ವಜನಿಕ ಭಾಷಣ ಕಲೆಯ ಪ್ರಚುರಪಡಿಸುವ ಒಂದು ಪ್ರಯತ್ಬ ಕೂಡಾ ಇದು. ಈ ಸ್ಪರ್ಧೆಯಲ್ಲಿ ಭಾಷಣ ಕಲೆ ಮಾತ್ರವಲ್ಲದೇ ಅಣಕು ಸಂಸತ್ತು, ಚರ್ಚೆ, ಆಶು ಭಾಷಣ ಪ್ರಕಾರಗಳನ್ನು ಕೂಡಾ ಒಳಗೊಂಡಿದೆ.
ಪ್ರತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಪ್ರತಿ ವಿದ್ಯಾರ್ಥಿಯು ವೈಯುಕ್ತಿಕವಾಗಿ ಸ್ಪರ್ಧೆ ಮಾಡಲಿದ್ದಾರೆ. ವಿಜೇತರಿಗೆ ಒಟ್ಟು ರುಪಾಯಿ 60,000 ಮೌಲ್ಯದ ಬಹುಮಾನಗಳನ್ನು ಗೆಲ್ಲುವ ಅವಕಾಶ ಕೂಡಾ ಇದೆ. ಕಾರ್ಯಕ್ರಮವು ಕನ್ನಡ ಭಾಷೆಯಲ್ಲಿ ನಡೆಯಲಿದ್ದು, ಕನ್ನಡ ಭಾಷೆಗೆ ಆದ್ಯತೆ ನೀಡಲಾಗುವುದು.
ಡಿಜಿಟಲ್ ಯುಗದಲ್ಲಿ ಭಾಷಣ ಕಲೆಯನ್ನು ಪುನರುಜ್ಜೀವನಗೊಳಿಸುವುದು, ಯುವ ಜನರಲ್ಲಿ ವಿಮರ್ಶಾತ್ಮಕ ಚಿಂತನೆ, ಸ್ಪಷ್ಟತೆ, ಆತ್ಮವಿಶ್ವಾಸ ಮತ್ತು ಸಂವಹನವನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
"ಅಭಿವ್ಯಕ್ತ" ಕಾರ್ಯಕ್ರಮದ ಆಡಿಷನ್ ಗಳು ಜುಲೈ 06 ರಂದು ಉಡುಪಿಯ ಸೈಲಸ್ ಇಂಟರ್ನ್ಯಾಷನಲ್ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ.
ನಿಯಮ ಮತ್ತು ಪ್ರಸಾರದ ಮಾಹಿತಿ:
• ಪ್ರೌಢಶಾಲೆಯ ವಿದ್ಯಾರ್ಥಿಗಳು ಮಾತ್ರ ಈ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
• ಒಂದು ಶಾಲೆಯಿಂದ ಕೇವಲ ಇಬ್ಬರಿಗೆ ಮಾತ್ರ ಅವಕಾಶ, ಭಾಷಣ ಸ್ಪರ್ಧೆಯು ವೈಯುಕ್ತಿಕವಾಗಿ ನಡೆಯಲಿದೆ.
• ವೈಯುಕ್ತಿಕವಾಗಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ನೋಂದಾವಣೆ ಪತ್ರವನ್ನು ಶಾಲೆ ಮುಖ್ಯಸ್ಥರ ಸಹಿ ಮತ್ತು ಮುದ್ರೆಯೊಂದಿಗೆ ಕಳುಹಿಸಬೇಕು.
• ಸ್ಪರ್ಧಿಗಳ ಚತುರ ಮಾತುಗಾರಿಕೆ, ವಿಷಯ ಪ್ರಸ್ತುತಿ, ವಿಷಯದ ಆಯ್ಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
• ಆಯ್ಕೆ ಸುತ್ತಿ ನಲ್ಲಿ (Audition) ನಿಮ್ಮ ಆಯ್ಕೆಯ ವಿಷಯಗಳ ಕುರಿತಾಗಿ ಮಾತನಾಡಬಹುದು.
• ಯಾವುದೇ ಜಾತಿ, ಧರ್ಮ, ವ್ಯಕ್ತಿಗೆ ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡುವಂತಿಲ್ಲ.
• ಆಯ್ಕೆ ಸುತ್ತಿ ನಲ್ಲಿ ಒಬ್ಬ ಸ್ಪರ್ಧಿಗೆ ಮಾತನಾಡಲು 2 ರಿಂದ 3 ನಿಮಿಷದ ವರೆಗೆ ಕಾಲಾವಕಾಶ ಇರುತ್ತದೆ.
• ಮಾತನಾಡುವ ವಿಷಯದ ಮೇಲೆ ಪೂರ್ವ ತಯಾರಿ ಮಾಡಿಕೊಂಡು ಬರಬೇಕು, ನೋಡಿ ಮಾತನಾಡುವಂತಿಲ್ಲ
• ಕಾರ್ಯಕ್ರಮ ಕನ್ನಡ ಭಾಷೆಯಲ್ಲಿ ನಡೆಯಲಿದ್ದು, ಕನ್ನಡ ಭಾಷೆಗೆ ಆದ್ಯತೆ ನೀಡಲಾಗುವುದು
• ಆಯ್ಕೆ ಸುತ್ತಿನ ನಂತರದ ಸ್ಪರ್ಧೆಯು ವಿವಿಧ ಸುತ್ತುಗಳಲ್ಲಿ ನಡೆಯಲಿದ್ದು, ರಾಜಕೀಯ, ವಿಜ್ಞಾನ, ಇತಿಹಾಸ, ಪ್ರಚಲಿತ ವಿದ್ಯಾಮಾನ, ವ್ಯಕ್ತಿತ್ವ, ತಂತ್ರಜ್ಞಾನ ಹೀಗೆ ವಿವಿಧ ವಿಷಯಗಳನ್ನು ಒಳಗೊಂಡಿರುತ್ತದೆ.
• ಸ್ಪರ್ಧೆಯು ಸಂಚಿಕೆ (Episode) ರೂಪದಲ್ಲಿ ದಾಯ್ಜಿವರ್ಲ್ಡ್ ವಾಹಿನಿಯಲ್ಲಿ ಪ್ರಸಾರವಾಗುತ್ತದೆ.
• ಸ್ಪರ್ಧಾರ್ಥಿಗಳೊಂದಿಗೆ ಒಬ್ಬರು ಶಿಕ್ಷಕರು ಅಥವಾ ಪೋಷಕರು ಇರತಕ್ಕದ್ದು. ಮುಂದಿನ ಎಲ್ಲಾ ಸಂವಹನವನ್ನು ಶಿಕ್ಷಕರ ಮುಖಾಂತರ ನಡೆಸಲಾಗುವುದು.
• ಕಾರ್ಯಕ್ರಮದಲ್ಲಿನ ಬದಲಾವಣೆ, ಸಮಯ ನಿಗದಿ, ರದ್ದು ಮಾಡುವುದು ಹಾಗೂ ದಿನಾಂಕ ಮರುನಿಗದಿ ಮಾಡುವ ಅಧಿಕಾರ ಕಾರ್ಯಕ್ರಮದ ಆಯೋಜಕರಿಗೆ ಇರುತ್ತದೆ.
• ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತಹ ಮಾಹಿತಿಯನ್ನು ಸರಿಯಾದ ಸಮಯಕ್ಕೆ ತಿಳಿಸಲಾಗುವುದು.
• ಸ್ಪರ್ಧೆಯ ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಮತ್ತು 3 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು
• ಆಯ್ಕೆ ಸುತ್ತಿನಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.
ವಿಜೇತರಿಗೆ 60,000 ರೂ. ಮೌಲ್ಯದ ನಗದು ಬಹುಮಾನ ಗೆಲ್ಲುವ ಅವಕಾಶ
ಭಾಗವಹಿಸುವಿಕೆಯನ್ನು ಖಚಿತ ಪಡಿಸಲು ಕೊನೆಯ ದಿನಾಂಕ ಜೂನ್ 30, 2025
ನೋಂದಾವಣೆಗಾಗಿ ಲಾಗ್ ಇನ್ ಮಾಡಿ: www.daijiworldudupi.com/Abv2025
ಆಡಿಶನ್ ನಡೆಯುವ ದಿನಾಂಕ ಮತ್ತು ಸ್ಥಳ:
ಆಡಿಶನ್ ದಿನಾಂಕ- ಜುಲೈ 06, 2025
ಸೈಲಸ್ ಇಂಟರ್ನ್ಯಾಷನಲ್ ಸ್ಕೂಲ್, ನಿಟ್ಟೂರು, ಉಡುಪಿ
ಭಾಗವಹಿಸಲು ಇಚ್ಚಿಸುವವರು ಸಂಪರ್ಕಿಸಿछ +91 7338637683 / 90, +91 9900161556
ಇ-ಮೇಲ್ ವಿಳಾಸ: contestdwudupi@gmail.com