ಮಂಜೇಶ್ವರ , ಜೂ. 30 (DaijiworldNews/AK):ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಯೋರ್ವ ನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಚ್ಚಂಪಾಡಿಯ ಅಬ್ದುಲ್ ಜಬ್ಬಾರ್ (37) ಬಂಧಿತ ಆರೋಪಿ. ಪಾವೂರು ಕೋಡಿ ಮನೆಯ ಅಬ್ದುಲ್ ಖಾದರ್ (35) ಮತ್ತು ಮಹಮ್ಮದ್ ಜಾಫರ್ ( 31) ರವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿದೆ.
ಈತನಲ್ಲದೆ ಹೊಸಂಗಡಿ ಯಾಕೂಬ್, ಮುಬಾರಕ್ ಮತ್ತು ಅಶ್ರಫ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮಚ್ಚಂಪಾಡಿಯಲ್ಲಿ ಕಾರಿಗೆ ಸೈಡ್ ಕೊಡುವ. ವಿಚಾರದಲ್ಲಿ ಈ ಘಟನೆ ನಡೆದಿದೆ.