ಬೆಳ್ತಂಗಡಿ,ಸೆ.03: ಚಿಕ್ಕಮಗಳೂರು ಮೂಲದ ಇಬ್ಬರು ಯುವಕರಿಗೆ ಸ್ಥಳೀಯರು ಸೇರಿ ಥಳಿಸಿರುವ ಘಟನೆ ಬೆಳ್ತಂಗಡಿ ಬಸ್ಸ್ಟಾಂಡ್ನಲ್ಲಿ ನಿನ್ನೆ ಸಂಜೆಯ ವೇಳೆ ನಡೆದಿದೆ. ಬಸ್ ತಂಗುದಾಣದಲ್ಲಿ ಸ್ಥಳೀಯ ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ನಿಂತಿದ್ದ ಸಂದರ್ಭ ಚಿಕ್ಕಮಗಳೂರು ಮೂಲದ ಇಬ್ಬರು ಯುವಕರು ತಮ್ಮ ಮೊಬೈಲ್ನಲ್ಲಿ ವಿದ್ಯಾರ್ಥಿನಿಯ ಪೋಟೋ ತೆಗೆಯಲು ಮುಂದಾಗಿದ್ದರು ಎನ್ನುವ ಆರೋಪ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಚಿಕ್ಕಮಗಳೂರು ಮೂಲದ ಯುವಕರಿಗೆ ಕಾಲೇಜಿನ ವಿದ್ಯಾರ್ಥಿ ಮತ್ತು ಸ್ಥಳೀಯರು ಸೇರಿ ಥಳಿಸಿದ್ದಾರೆ. ಇನ್ನು ಈ ವಿಚಾರದಲ್ಲಿ ಹಲವಾರು ಗೊಂದಲಗಳಿದ್ದು ಚಿಕ್ಕಮಗಳೂರು ಮೂಲದ ಯುವಕರು ತಮ್ಮ ಮೊಬೈಲ್ನಲ್ಲಿ ಸೆಲ್ಪಿ ತೆಗೆಯುತ್ತಿದ್ದ ವೇಳೆ ತಪ್ಪಾಗಿ ಅರ್ಥೈಸಿ, ಕಾಲೇಜು ಯುವಕ ಚಿಕ್ಕಮಗಳೂರಿನ ಯುವಕನಿಗೆ ಹಲ್ಲೆ ನಡೆಸಿದ್ದಾನೆ ಎನ್ನುವ ಮಾತುಗಳು ಮೂಲಗಳಿಂದ ತಿಳಿದು ಬಂದಿದೆ. ಇನ್ನು ಘಟನೆ ಕುರಿತಂತೆ ಯಾವುದೇ ಕೇಸು ದಾಖಲಾಗಿಲ್ಲ.
![](https://daijiworld.ap-south-1.linodeobjects.com/iWeb/tvdaijiworld/img_tv247/03092017halle imge.jpg)
![](https://daijiworld.ap-south-1.linodeobjects.com/iWeb/tvdaijiworld/img_tv247/03092017halle belta.jpg)