ಉಡುಪಿ, ಜು 21 (Daijiworld News/MSP): ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಲಂಗಾರು ಹಾಕಿದ್ದ ಎರಡು ಮೀನುಗಾರಿಕಾ ಬೋಟುಗಳ ಬ್ಯಾಟರಿಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಮಲ್ಪೆ ಪೊಲೀಸರು ಬಂಧಿಸಲಾಗಿದೆ.

ಬಂಧಿತರನ್ನು ಕೊಡವೂರು ವಿಬಿ ರೋಡ್ ನಿವಾಸಿ ಆಲ್ ಮುಹೀತ (20), ಬಲರಾಮ ನಗರದ ಆದರ್ಶ (19) ಮತ್ತು ವಡಭಾಂಡೇಶ್ವರದ ಯಾಸಿನ್ (18) ಎಂದು ಗುರುತಿಸಲಾಗಿದೆ. ಕಳವು ಕುರಿತಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಳವು ಮಾಡಿದ ಎರಡು ಬೋಟಿನ ನಾಲ್ಕು ಬ್ಯಾಟರಿಗಳ ಮೊತ್ತ 46000 ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕಾರ್ಯಪ್ರವೃತ್ತರಾದ ಮಲ್ಪೆ ಪಿ.ಎಸ್.ಐ. ತಿಮ್ಮೇಶ್ ಬಿನ್ ನೇತೃತ್ವದ ತಂಡ ಕಲ್ಯಾಡಿ ಜಂಕ್ಷನ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ರಿಟ್ಜ್ ಕಾರಿನಲ್ಲಿ ತಿರುಗಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದು, ತನಿಖೆಯ ವೇಳೆ ಕಳವು ಮಾಡಿರುವುದನ್ನು ಆರೋಪಿತರು ಒಪ್ಪಿಕೊಂಡಿದ್ದಾರೆ. ಸುಮಾರು ರೂ 46000 ಮೌಲ್ಯದ 4 ಬೋಟಿನ ದೊಡ್ಡ ಬ್ಯಾಟರಿ ಹಾಗೂ ಕಳ್ಳತನ ಮಾಡಲು ಉಪಯೋಗಿಸುವ KA21- M 7491 ಮಾರುತಿ ರಿಟ್ಜ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆ ವಿಷ್ಣುವರ್ಧನ್ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ಉಡುಪಿ , ಕುಮಾರಚಂದ್ರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿ ಜೈಶಂಕರ್ ಪೊಲೀಸ್ ಅಧೀಕ್ಷಕರು ಉಡುಪಿ ಉಪವಿಭಾಗ, ಮಲ್ಪೆ ಠಾಣೆಯ ಮಂಜುನಾಥ ಪೊಲೀಸ್ ವೃತ್ತ ನಿರೀಕ್ಷಕರು ಉಡುಪಿ ವೃತ್ತ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ತಿಮ್ಮೇಶ್ ಬಿ.ಎನ್ ರವರ ನೇತೃತ್ವದಲ್ಲಿ ಮಲ್ಪೆ ಪೊಲೀಸರಾದ ಎಎಸ್ಐ ಸುಧಾಕರ, ಬಿ, ಹೆಚ್.ಸಿ ಜಯರಾಮ , ಹೆಚ್ಸಿ ರತ್ನಾಕರ, ಹೆಚ್.ಸಿ ಶಶಿಧರ , ಹೆಚ್.ಸಿ ಪ್ರವೀಣ್ ಹೆಚ್.ಸಿ ಸಂತೋಷ್, ಹೆಚ್.ಸಿ ವಿಕ್ರಮ ಬೇರೆ ಟ್ರೋ , ಹಾಗೂ ಪಿ.ಸಿ. ಚೇತನ್ ಪಿತ್ರೋಡಿ, ಪಿಸಿ ರವಿರಾಜ್, ಪಿ.ಸಿ.ಸದಾನಂದ ಪಿಸಿ ಮಂಜುನಾಥ ಜೀಪು ಚಾಲಕರಾದ ಹೆಚ್.ಸಿ ಮಹಾಬಲಿ ರವರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು .