ಬೆಳ್ತಂಗಡಿ, ಜು 26 (Daijiworld News/MSP): ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಟ ಆಡುತ್ತಿದ್ದ ವೇಳೆ ಸಬ್ ಇನ್ಸ್ಪೆಕ್ಟರ್ ನಂದ ಕುಮಾರ್ ಎಂ.ಎಂ ಅವರು ಠಾಣಾ ಸಿಬ್ಬಂದಿ ಗಳೊಂದಿಗೆ ದಾಳಿ ನಡೆಸಿ ಒಟ್ಟು 5 ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಜು.26 ರ ಶುಕ್ರವಾರ ನಡೆದಿದೆ.

ಬಂಧಿತರನ್ನು ಗುರುವಾಯನಕೆರೆ ಯ ಫಾರೂಕ್, ಪಣೆಜಾಲಿನ ಪ್ರಸನ್ನ, ಬೆಳಾಲಿನ ಯಾಕೂಬ್, ಗೋವಿಂದೂರಿನ ಸುಧಾಕರ ಶೆಟ್ಟಿ ಮತ್ತು ರೋಹಿತ್ ಜಾರಿಗೆಬೈಲ್ ಎಂಬವರೆಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ 1, 03, 370 ರೂ.ಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ನಡೆದ ಈ ದಾಳಿಯ ವೇಳೆ ತಂಡದಲ್ಲಿದ್ದ ಇತರ ನಾಲ್ವರು ತಪ್ಪಿಸಿಕೊಂಡಿರುತ್ತಾರೆ. ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.