ಮಂಗಳೂರು, ಸೆ. 3(DaijiworldNews/HR): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಆದಿತ್ಯರಾವ್ ಗೆ ಇಂದು ಮಂಪರ್ ಪರೀಕ್ಷೆ ನಡೆಯಲಿದೆ.

ಆದಿತ್ಯರಾವ್ ಗೆ ಮಡಿವಾಳದ ಫೋರೆನ್ಸಿಕ್ ಸೈನ್ಸ್ ಪ್ರಯೋಗಾಲಯದಲ್ಲಿ ಇಂದು ಮಂಪರು ಪರೀಕ್ಷೆ ನಡೆಯಲಿದ್ದು, ಬುಧವಾರ ಮಂಗಳೂರಿನಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದುಬಂದಿದೆ.
2020 ರ ಜನವರಿಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ ಈತ ಆತಂಕ ಸೃಷ್ಟಿಸಿದ್ದ ಬಳಿಕ ಬಾಂಬ್ ಅನ್ನು ನಿಷ್ಕ್ರಿಯ ದಳ ಸ್ಪೋಟಗೊಳಿಸಲಾಗಿತ್ತು. ಬಳಿಕ ಆದಿತ್ಯರಾವ್ ಬೆಂಗಳೂರು ಡಿಜಿ ಕಚೇರಿಯಲ್ಲಿ ಪೊಲೀಸರಿಗೆ ಶರಣಾಗಿದ್ದ.