ಕಾರ್ಕಳ, ಸೆ.14(DaijiworldNews/HR): ಕಲ್ಯಾ ಗ್ರಾಮದ ಹಾಳೆಕಟ್ಟೆ ಬಸ್ ನಿಲ್ದಾಣದ ಬಳಿ ಸಾರ್ವಜನಿಕರಿಂದ ಮಟ್ಕಾ ಜೂಜಿಗೆ ಹಣ ಸಂಗ್ರಹಿಸುತ್ತಿದ್ದ ಆರೋಪಿಯೊಬ್ಬನನ್ನು ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ನಜೀರ್ ಹುಸೈನ್ ಬಂಧಿಸಿದ್ದಾರೆ.

ಬೋಳದ ಕೊಂಟಿಮಾರು ದರ್ಖಾಸು ನಿವಾಸಿ ವಿಕ್ಟರ್ ವಿಲ್ಸನ್ ಕೊರೆಯಾ(32) ಪ್ರಕರಣದ ಆರೋಪಿ.
ತನ್ನ ಸ್ವಂತ ಲಾಭಗೋಸ್ಕರ 1 ರೂ ಗೆ 70 ರೂಪಾಯಿ ನೀಡುವುದಾಗಿ ಸಾರ್ವಜನಿಕರಿಂದ ಹಣವನ್ನು ಪಣವಾಗಿಟ್ಟು ಹಣವನ್ನು ಪಡೆದುಕೊಂಡು ಮಟ್ಕಾ ಜುಗಾರಿ ಆಟ ಆಡುತ್ತಿದ್ದನೆಂಬ ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.
ಪಣವಾಗಿಟ್ಟ ಹಣ ರೂ. 1075, ಮಟ್ಕಾ ಬರೆದ ಚೀಟಿ, ಬಾಲ್ ಪೆನ್ -01 ನ್ನು ಮಹಜರು ಮುಖೇನ ಪೊಲೀಸರು ವಶಪಡಿಸಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.