ಕಾರ್ಕಳ, ಅ. 04 (DaijiworldNews/SM): ಹಿರಿಯ ನಾಗರಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ರೋಟರಿ ಕ್ಲಬ್ ಬೆಳ್ಮಣ್ ವತಿಯಿಂದ 111 ಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿದ ಶತಾಯಿಷಿ ಅಜ್ಜಿ ಸೂಡ ನಿವಾಸಿ ನರ್ಸಿ ಮೂಲ್ಯರನ್ನು ಸಮ್ಮಾನಿಸಲಾಯಿತು.


111ರ ಈ ಹಿರಿಯ ಅಜ್ಜಿ ಇಂದಿಗೂ ತಮ್ಮ ದೈನಂದಿನ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನರ್ಸಿಯವರು ಈ ಸಮ್ಮಾನ ಸ್ವೀಕರಿಸಿದ್ದಾರೆ.
ಇನ್ನು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ಶುಭಾಷ್ ಕುಮಾರ್ ವಹಿಸಿ ಎಲ್ಲರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ವಲಯ ೫ರ ಮಾಜಿ ಸಾಹಯಕ ಗವರ್ನರ್ ಪಿ. ಎಚ್. ಎಫ್. ಸೂರ್ಯಕಾಂತ ಶೆಟ್ಟಿ ಗೌರವಾರ್ಪಣೆ ನಡೆಸಿಕೊಟ್ಟರು. ವಲಯ 5ರ ವಲಯ ಸೇನಾನಿ ಸುರೇಶ್ ರಾವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಪೂರ್ವಾಧ್ಯಕ್ಷ ಪಿ.ಎಚ್.ಎಫ್. ರನೀಶ್ ಆರ್. ಶೆಟ್ಟಿ, ಸಂಸ್ಥೆಯ ಕಾರ್ಯದರ್ಶಿ ರವಿರಾಜ್ ಶೆಟ್ಟಿ, ಸಂಸ್ಥೆಯ ಸದಸ್ಯ ರಾಜೇಶ್ ಸಾಲ್ಯಾನ್ ಹಾಗೂ ನರ್ಸಿ ಮೂಲ್ಯ ಇವರ ಕುಟುಂಬ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.