ಕಾಸರಗೋಡು, ಅ. 12 (DaijiworldNews/PY): ಜೆಸಿಬಿ ಯಂತ್ರ ತಗುಲಿ ಸ್ಕೂಟರ್ ಸವಾರನೋರ್ವ ಮೃತಪಟ್ಟ ದಾರುಣ ಘಟನೆ ಅ.12ರ ಸೋಮವಾರ ಮಧ್ಯಾಹ್ನ ಚಟ್ಟಂಚಾಲ್ನಲ್ಲಿ ನಡೆದಿದೆ.

ಮೃತರನ್ನು ಆಲಂಪಾಡಿಯ ಅಬ್ದುಲ್ಲ ಹಾಜಿ (60) ಎಂದು ಗುರುತಿಸಲಾಗಿದೆ.
ಜೆಸಿಬಿ ಯಂತ್ರ ತಗುಲಿ ಗಂಭೀರ ಗಾಯಗೊಂಡ ಅಬ್ದುಲ್ಲ ಹಾಜಿ ಅವರನ್ನು ಕಾಸರಗೋಡು ಆಸ್ಪತ್ರೆಗೆ ಕೊಂಡೊಯ್ಯಲಾಯಿತ್ತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.
ಘಟನೆಯ ಬಗ್ಗೆ ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.