ಮಂಗಳೂರು,ಅ.15 (DaijiworldNews/HR): ಬಿಜೆಪಿಯವರು ಮಿಥುನ್ ರೈಯಿಂದ ಹಿಂದುತ್ವ ಕಲಿಯಲಿಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಂಗಳೂರಿಗೆ ಬಂದರೆ ಮಸಿ ಬಳಿಯುತ್ತೇವೆ ಎಂದು ಹೇಳಿಕೆ ನೀಡಿದ್ದ ದಕ್ಷಿಣ ಕನ್ನಡ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ವಿರುದ್ಧ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ದೂರು ನೀಡಿದ್ದು, ಇದನ್ನು ಖಂಡಿಸಿ ಪ್ರತಿಕ್ರಿಯೆ ನೀಡಿದ ಹರೀಶ್ ಕುಮಾರ್, ಯೋಗಿ ಆದಿತ್ಯನಾಥ್, ಮಿಥುನ್ ರೈ ರಾಜಕಾರಣಿಗಳು. ಯೋಗಿಯವರನ್ನು ಈಗ ನಾವು ಸ್ವಾಮೀಜಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮಿಥುನ್ ರೈ ಗೆ ಓರ್ವ ಮುಖ್ಯಮಂತ್ರಿಯನ್ನು ಟೀಕಿಸುವ ಹಕ್ಕಿಲ್ವೇ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಮಿಥುನ್ ರೈ ಬಿಜೆಪಿಯವರಿಂದ ಹಿಂದುತ್ವ ಕಲಿಯಬೇಕೇ? ಬಿಜೆಪಿಯವರು ಮಿಥುನ್ ರೈಯಿಂದ ಹಿಂದುತ್ವ, ಸಾಮಾಜಿಕ ನ್ಯಾಯ, ಎಲ್ಲಾ ಧರ್ಮೀಯರನ್ನು ಹೇಗೆ ಪ್ರೀತಿಸಬೇಕು ಎಂಬುದನ್ನು ನೋಡಿ ಕಲಿಯಲಿ. ದ್ವೇಷದ ರಾಜಕಾರಣ ಒಳ್ಳೆಯದಲ್ಲ.ಟೀಕೆಗಳನ್ನು ಎದುರಿಸುವ ಶಕ್ತಿ ಬೇಕೆಂದು ಹೇಳಿದ್ದಾರೆ.