ಮಂಗಳೂರು,ಅ. 17 (DaijiworldNews/HR): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಕೆಂಪು ಬಾಕ್ಸೈಟ್ ಗಣಿಗಾರಿಕೆ ನಡೆಯುತ್ತಿದ್ದು, ಅದನ್ನು ನಿಲ್ಲಿಸಿ ಮಗ್ರ ತನಿಖೆ ನಡೆಸಬೇಕೆಂದು ಮಾಜಿ ಸಚಿವ ಬಿ ರಮನಾಥ್ ರೈ ಒತ್ತಾಯಿಸಿದ್ದಾರೆ.






ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಯ ಗಣಿಗಾರಿಕೆ ಹಗರಣದಂತೆಯೇ ಜಿಲ್ಲೆಯಲ್ಲಿ ಕೆಂಪು ಬಾಕ್ಸೈಟ್ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಮುಡಿಪು, ಬಾಲೆಪುನಿ ಮತ್ತು ಗಣಿಗಾರಿಕೆ ಕೈಗೊಳ್ಳಲು ಗಣಿಗಾರರು ನಕಲಿ ಪರವಾನಗಿಗಳನ್ನು ಬಳಸುತ್ತಿದ್ದಾರೆ. ಈ ಚಟುವಟಿಕೆಗೆ ಆಡಳಿತ ಪಕ್ಷದ ಶಾಸಕರ ಕೈಜೋಡಿಸಿದ್ದಾರೆ. ಕರ್ನಾಟಕ, ಕೇರಳ, ಆಂಧ್ರ ಮತ್ತು ತಮಿಳುನಾಡಿನ ಹಗರಣಗಾರರು ಈ ಹಗರಣದಲಲ್ಲೂ ಪಾಲ್ಗೊಂದಿದ್ದಾರೆ ಎಂದರು.
ಇನ್ನು ಈ ಗಣಿಗಾರಿಕೆಯಿಂದಾಗಿ ಇನ್ಫೋಸಿಸ್ ಟೆಕ್ನಾಲಜೀಸ್, ಸೇಂಟ್ ಜೋಸೆಫ್ ಚರ್ಚ್ ಮತ್ತು ಕೃಷ್ಣಧಾಮ ಪ್ರಾರ್ಥನಾ ಕೇಂದ್ರಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಗಣಿಗಾರಿಕೆಯ ಬಗ್ಗೆ ತನಿಖೆ ನಡೆಸಬೇಕೆಂದು ಮತ್ತು ಇದಕ್ಕಾಗಿ ಸಮಿತಿಯನ್ನು ರಚಿಸಬೇಕೆಂದು ಒತ್ತಾಯಿಸಿದ್ದಾರೆ.