ಬೆಳ್ತಂಗಡಿ, ಅ. 19 (DaijiworldNews/SM): ಬಕೆಟ್ ನಲ್ಲಿದ್ದ ನೀರಿಗೆ ಬಿದ್ದು ಎಂಟು ತಿಂಗಳ ಹೆಣ್ಣು ಮಗು ಮೃತಪಟ್ಟಿರುವ ಘಟನೆ ನಡೆದಿದೆ. ಅರಸಿನಮಕ್ಕಿಯ ಕಲ್ಲಕೋಟೆ ನಿವಾಸಿ ಜಗದೀಶ್ ಹಾಗೂ ವಿದ್ಯಾ ದಂಪತಿಯ ಪುತ್ರಿ ಮೃತಪಟ್ಟ ಮಗುವಾಗಿದೆ.

ತಾಯಿ ಮನೆಯ ಸಮೀಪದಲ್ಲೇ ಬಟ್ಟೆ ಒಗೆಯುತ್ತಿದ್ದರು. ಈ ಸಂದರ್ಭದಲ್ಲಿ ಮಗು ಮನೆಯಿಂದ ಹೊರ ಬಂದಿದ್ದಾಳೆ. ಕೈಯಲ್ಲಿದ್ದ ಲೋಟ ಬಕೆಟ್ ಗೆ ಮುಳುಗಿಸಿದ್ದು, ಇದೇ ಸಂದರ್ಭದಲ್ಲಿ ಮಗು ಬಕೆಟ್ ನೊಳಗೆ ಬಿದ್ದಿದೆ ಎಂದು ತಿಳಿದುಬಂದಿದೆ.
ಇನ್ನು ಸ್ವಲ್ಪ ಹೊತ್ತಿಗೆ ಬಳಿಕ ಮಗು ಕಾಣದಿದ್ದಾಗ ತಾಯಿ ಮಗುವಿನ ಹುಡುಕಾಟದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಮಗು ಬಕೆಟ್ ನಲ್ಲಿ ಪತ್ತೆಯಾಗಿದೆ.