ಮಂಗಳೂರು, ಅ. 24 (DaijiworldNews/HR) : ನವರಾತ್ರಿಯ ಎಂಟನೇ ದಿನವಾದ ಇಂದು ಮಂಗಳೂರಿನ ಹಲವೆಡೆ ಆಯುಧ ಪೂಜೆಯನ್ನು ಆಚರಿಸಲಾಯಿತು.








ಆಯುಧ ಪೂಜೆಯ ದಿನದಂದು, ದ್ವಿಚಕ್ರ ವಾಹನಗಳು, ನಾಲ್ಕು ಚಕ್ರಗಳು ಮತ್ತು ಕಂಪ್ಯೂಟರ್, ಕ್ಯಾಮೆರಾಗಳು ಮತ್ತು ಕೃಷಿ ಉಪಕರಣಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳಿಗೆ ಅರ್ಚಕರು ಪೂಜೆ ಸಲ್ಲಿಸಿದರು. ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿ ದೇವತೆಗಳನ್ನು ಈ ದಿನ ಪೂಜಿಸಲಾಗುತ್ತದೆ.
ಒಂಬತ್ತು ದಿನಗಳಲ್ಲಿ ರಾಕ್ಷಸರನ್ನು ಸರ್ವನಾಶ ಮಾಡಿದ ನಂತರ ದುರ್ಗಾ ದೇವಿಯು ತನ್ನ ಶಸ್ತ್ರಾಸ್ತ್ರಗಳನ್ನು ಅವುಗಳ ಬಳಕೆಯ ಸಾಧನೆಯಾಗಿ ಬದಿಗಿಟ್ಟು ಪೂಜಿಸಿದಳು ಎಂದು ನಂಬಿಕೆ ಇದೆ.
ಆಯುಧ ಪೂಜೆಯು ನಮ್ಮ ವಸ್ತುಗಳಿಗೆ ಮುಂದಿನ ವರ್ಷದವರೆಗೆ ಯಾವುದೇ ರೀತಿಯ ಹಾನಿ ಉಂಟಾಗಬಾರದು ಎಂಬುದಕ್ಕಾಗಿ ಮಾಡುತ್ತಾರೆ.