ಮಂಗಳೂರು, ಡಿ.07 (DaijiworldNews/MB) : ಮದುವೆ ಸಮಾರಂಭಕ್ಕೆ ಜನರನ್ನು ಕರೆದೊಯ್ಯುತ್ತಿದ್ದ ಸರ್ವಿಸ್ ಬಸ್ ಅನ್ನು ಟೂರಿಸ್ಟ್ ವಾಹನ ಮಾಲೀಕರು ಹಾಗೂ ಚಾಲಕರು ತಡೆದು ನಿಲ್ಲಿಸಿದ ಘಟನೆ ಡಿಸೆಂಬರ್ 7 ರ ಸೋಮವಾರ ತೊಕ್ಕೊಟ್ಟಿನಲ್ಲಿ ನಡೆದಿದೆ.



ನಿರ್ದಿಷ್ಟ ಒಂದು ವಿವಾಹ ಸಮಾರಂಭಕ್ಕೆ ತೆರಳುವ ಜನರನ್ನು ಸರ್ವಿಸ್ ಬಸ್ಗಳು ಸಾಗಿಸಬೇಕಾಗಿಲ್ಲ. ಅದಕ್ಕಾಗಿ ಟೂರಿಸ್ಟ್ ಬಸ್ಗಳು ಇವೆ ಎಂದು ಟೂರಿಸ್ಟ್ ವಾಹನದ ಮಾಲೀಕರು ಮತ್ತು ಚಾಲಕರು ಹೇಳಿದರು.
ಸ್ಥಳಕ್ಕೆ ಉಳ್ಳಾಲ ಪೊಲೀಸರು ಮತ್ತು ಸಂಚಾರ ಪೊಲೀಸ್ ಸಿಬ್ಬಂದಿಗಳು ಧಾವಿಸಿದರು.