ಮಂಗಳೂರು, ಡಿ.13 (DaijiworldNews/PY):ಕ್ರಿಶ್ಚಿಯನ್ ಕ್ರೀಡಾ ಸಂಘ ಮಂಗಳೂರು ಆಯೋಜಿಸಿದ್ದ ಮಂಗಳೂರು ಮತ್ತು ಉಡುಪಿ ಡಯಾಸಿಸ್ನ ಕ್ರಿಶ್ಚಿಯನ್ ಸಮುದಾಯದ ಆಟಗಾರರಿಗಾಗಿ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಡಿಸೆಂಬರ್ 13 ರ ರವಿವಾರದಂದು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಫ್ರಾ. ಅಜಿತ್ ಮೆನೆಜಸ್ ಅವರು ಉದ್ಘಾಟಿಸಿದರು.






























ಈ ಸಂದರ್ಭದಲ್ಲಿ ಮಾತನಾಡಿದ ಆಡಳಿತಾಧಿಕಾರಿ ಮುಲ್ಲರ್ ವೈದ್ಯಕೀಯ ಕಾಲೇಜು, ಅಜಿತ್ ಮೆನೆಜಸ್, ‘ಕ್ರಿಶ್ಚಿಯನ್ ಸಮುದಾಯಕ್ಕಾಗಿ ಈ ಪಂದ್ಯಾವಳಿಯನ್ನು ನಡೆಸುವುದು ಕ್ರಿಶ್ಚಿಯನ್ ಕ್ರೀಡಾ ಸಂಘದ ಉತ್ತಮ ಚಿಂತನೆಯ ಪ್ರಕ್ರಿಯೆ. ಕ್ರೀಡೆಗಳ ಮೂಲಕ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳಲು ನಮ್ಮ ದೇಹವು ಆರಾಮವಾಗಿರುವಂತೆ ತಾಲೀಮು ಮಾಡಬೇಕಾಗುತ್ತದೆ ಎಂದರು.
ಚಿನ್ನದ ಪದಕ ವಿಜೇತ ಏಷ್ಯನ್ ಮಾಸ್ಟರ್ ಅಥ್ಲೆಟಿಕ್ಸ್ ಮೇರಿ ಹಿಲ್ಡಾ ಫರ್ನಾಂಡಿಸ್ ಮತ್ತು ಯುವ ಸಬಲೀಕರಣ ವಿಭಾಗದ ಉಪನಿರ್ದೇಶಕ ಪ್ರದೀಪ್ ಡಿ ಸೋಜಾ, ಕ್ರಿಶ್ಚಿಯನ್ ಕ್ರೀಡಾ ಸಂಘದ ಅಧ್ಯಕ್ಷ ಇವಾನ್ ಪತ್ರಾವ್, ಮಂಗಳ ಬ್ಯಾಡ್ಮಿಂಟನ್ ಕ್ಲಬ್ ಅಧ್ಯಕ್ಷ ಅಶೋಕ್ ಹೆಗ್ಡೆ ಉಪಸ್ಥಿತರಿದ್ದರು.
ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಒಟ್ಟು 141 ತಂಡಗಳು ಭಾಗವಹಿಸಿವೆ.ಸಂಘದ ಖಜಾಂಚಿ ಮೆಲ್ವಿನ್ ಪೆರಿಸ್ ಈ ಕಾರ್ಯಕ್ರಮವನ್ನು ನಿರೂಪಿಸಿದರು. ಅವೆರಿಲ್ ರೊಡ್ರಿಗಸ್ ಸ್ವಾಗತಿಸಿದರು ಮತ್ತು ಪಂದ್ಯಾವಳಿಯ ಸಲಹೆಗಾರ ಜಾನ್ ಪೈಸ್ ಅವರು ಧನ್ಯವಾದ ಸಲ್ಲಿಸಿದರು.
ಪಂದ್ಯಾವಳಿಯು, 15 ವರ್ಷಕ್ಕಿಂತ ಕಿರಿಯ, 15 ವರ್ಷಕ್ಕಿಂತ ಮೇಲ್ಪಟ್ಟ, 25 ವರ್ಷಕ್ಕಿಂತ ಮೇಲ್ಪಟ್ಟ, 35 ವರ್ಷಕ್ಕಿಂತ ಮೇಲ್ಪಟ್ಟ, 45 ವರ್ಷಕ್ಕಿಂತ ಮೇಲ್ಪಟ್ಟ, 55 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 15 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬಾಲಕರು ಹಾಗೂ ಪುರುಷರಿಗೆ ಹಾಗೂ 15 ವರ್ಷಕ್ಕಿಂತ ಕಡಿಮೆ, 15 ವರ್ಷಕ್ಕಿಂತ ಮೇಲ್ಪಟ್ಟ, 25 ಕ್ಕಿಂತ ಮೇಲ್ಪಟ್ಟ ಮತ್ತು 25 ವರ್ಷಕ್ಕಿಂತ ಮೇಲ್ಪಟ್ಟ ಬಾಲಕಿಯರು ಮತ್ತು ಮಹಿಳೆಯರಿಗಾಗಿ ನಡೆದಿದೆ.
ಕೊರೊನಾದ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಹೊರಡಿಸಿದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಸರಿಸಲು ಆಟಗಾರಲ್ಲಿ ಕೋರಲಾಯಿತು.