ಉಡುಪಿ, ಡಿ.17 (DaijiworldNews/PY): ಡಿ.13ರ ರವಿವಾರದಂದು ಮಲ್ಪೆ ಮೀನುಗಾರಿಕೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ 28 ಮೀನುಗಾರರ ಪೈಕಿ ಸುಧೀರ್ಮುಲ್ಕಿ(30) ಎಂಬವರ ಮೃತದೇಹ ಡಿ.16ರ ಬುಧವಾರದಂದು ಮಲ್ಪೆ ಬಂದರಿನಲ್ಲಿ ಟಿ ಧಕ್ಕೆಯ ಹೊಳೆಯಲ್ಲಿ ಪತ್ತೆಯಾಗಿದೆ.

ಸಾಂದರ್ಭಿಕ ಚಿತ್ರ
ಉಡುಪಿಯ ಕೊಡವೂರು ಗ್ರಾಮದ ನಿವಾಸಿ ಮಹಮ್ಮದ್ ಅಲಿ(42) ಇವರು ಮಲ್ಪೆಯಲ್ಲಿ ಜಯಲಕ್ಷ್ಮೀ ಬೋಟಿನ ಪಾಲುದಾರಿಕೆ ನಡೆಸಿಕೊಂಡಿದ್ದಾರೆ. ಡಿ.13ರ ರವಿವಾರದಂದು ಅಶೋಕ ಸುವರ್ಣ ತಂಡೇಲರಾಗಿ ಹಾಗೂ ಗಣೇಶ, ಸುಧೀರ್, ನಾರಾಯಣ ಹಾಗೂ ಇತರರೊಂದಿಗೆ 28 ಜನ ಮೀನುಗಾರರು ಮೀನುಗಾರಿಕೆಗೆ ತೆರಳಿ ಡಿ.14ರ ಸೋಮವಾರದಂದು ಮಲ್ಪೆ ಬಂದರ ಧಕ್ಕೆ ಬಂದು ಮೀನು ಖಾಲಿ ಮಾಡಿ ಬೋಟ್ ಅನ್ನು ಲಂಗರು ಹಾಕಿ ಕಟ್ಟಿದ್ದರು.
ಈ ನಡುವೆ ಡಿ.16ರ ಬುಧವಾರದಂದು ಮಧ್ಯಾಹ್ನ 1 ಗಂಟೆಗೆ ಮಹಮ್ಮದ್ ಅಲಿ ಅವರಿಗೆ ಪವನ್ ಮುಲ್ಕಿ ಅವರು ಕರೆ ಮಾಡಿ ಸುಧೀರ್ ಮುಲ್ಕಿ ಅವರ ಮೃತ ದೇಹ ಮಲ್ಪೆ ಬಂದರಿನ ಟಿ ಧಕ್ಕೆಯ ಹೊಳೆಯಲ್ಲಿ ತೇಲುತ್ತಿರುವುದಾಗಿ ತಿಳಿಸಿದ್ದಾರೆ. ಬಳಿಕ ಮಹಮ್ಮದ್ ಅಲಿ ಹಾಗೂ ಪಾಲುದಾರರು ಸ್ಥಳ್ಕಕೆ ಹೋಗಿ ನೋಡಿದಾಗ ಸುಧೀರ ಅವರ ಮೃತದೇಹ ಕಂಡುಬಂದಿದೆ. ಸುಧೀರ್ ಅವರು ಡಿ.15ರ ಮಂಗಳವಾರದಂದು ಬೆಳಗ್ಗೆ 10 ಗಂಟೆಯಿಂದ ಡಿ.16ರ ಬುಧವಾರದ ಅಅವಧಿಯಲ್ಲಿ ಬೋಟ್ನಲ್ಲಿದ್ದವರು ಧಕ್ಕೆಗೆ ಹೋಗುವಾಗ ಅಥವಾ ಬೇರೆ ಯಾವುದೋ ರೀತಿಯಲ್ಲಿ ಧಕ್ಕೆ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಳೆಯಲ್ಲಿ ಪ್ರಕರಣ ದಾಖಲಾಗಿದೆ.