ಸುಳ್ಯ,ಡಿ.18 (DaijiworldNews/HR): ಸುಳ್ಯದ ಜೀವ ನದಿ ಪಯಸ್ವಿನಿಗೆ ಅರಂತೋಡು ತೊಡಿಕಾನ ಸಂಪರ್ಕ ಸೇತುವೆಯ ಮೂಲಕ ತಿಂದು ಉಳಿದ ಎಂಜಲು ಆಹಾರ ಮತ್ತು ಊಟಕ್ಕೆ ಬಳಸಿದ ಹಾಳೆ ತಟ್ಟೆ ಎಸೆದು ಅನಾಗರಿಕತೆ ಮೆರೆದಿದ್ದಾರೆ.



ಪಯಸ್ವಿನಿಗೆ ನದಿಗೆ ಸೇತುವೆ ಮೂಲಕ ನಿಂತು ತ್ಯಾಜ್ಯ ಎಂಜಲು ಆಹಾರ ಎಸೆದಿದ್ದಾರೆ. ಈ ಸಂದರ್ಭದಲ್ಲಿ ಸೇತುವೆಯ ಮೇಲೆ ಎಂಜಲು ಆಹಾರ ಚೆಲ್ಲಿ ದುರ್ವಾಸನೆ ಬೀರುತ್ತಿದ್ದು, ಇದರಿಂದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳಕ್ಕೆ ತೆರಳುವ ಭಕ್ತಾಧಿಗಳಿಗೆ ಹಾಗೂ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ಗ್ರಾಮದಲ್ಲಿ ಎಲ್ಲೊ ಕಾರ್ಯಕ್ರಮ ನಡೆಸಿದವರು ಈ ಕೃತ್ಯ ಎಸೆದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಪಯಸ್ವಿನಿ ನದಿಯ ಕೆಳಭಾಗದಲ್ಲಿ ಸುಳ್ಯ ತಾಲೂಕಿನ ಗಡಿಭಾಗ ಪಂಜಿಕಲ್ಲು ತನಕವು ಈ ನದಿಯ ನೀರನ್ನು ಕುಡಿಯಲು ಬಳಸುತ್ತಾರೆ.
ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವೈಜ್ಞಾನಿಕವಾಗಿ ಕಸವಿಲೆವಾರಿ ಮಾಡುವ ಕೆಲಸ ನಡೆಯುತ್ತಿದೆ.
ಇಷ್ಟೆಲ್ಲ ವಿಷಯ ಜನರಿಗೆ ತಿಳಿದಿದ್ದರೂ ಪಯಸ್ವಿನಿ ಹೊಳೆಗೆ ತ್ಯಾಜ್ಯ ಎಸೆದಿರುವುದು ಅನಾಗರಿಕತೆಯನ್ನು ತೋರಿಸುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.