ಕಾರ್ಕಳ, ಡಿ.18 (DaijiworldNews/HR): ನೂತನ ಆಡಳಿತದ ಕಾರ್ಕಳ ಪುರಸಭೆಯ ಪ್ರಥಮ ಸಭೆಯಲ್ಲಿ ಮುಖ್ಯಾಧಿಕಾರಿ ರೇಖಾ ಶೆಟ್ಟಿಯವರ ತಪ್ಪಿನಿಂದಾಗಿ ಪ್ರತಿಪಕ್ಷ ಸದಸ್ಯರಿಂದ ಮಂಗಳಾರತಿ ಮಾಡಿಕೊಳ್ಳಬೇಕಾದ ಘಟನೆ ನಡೆದಿದೆ.

ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭ ಎಂದು ಕರೆಯಲಾಗುವ ಪ್ರತಿಕಾರಂಗಕ್ಕೆ ಅಗೌರವ ಸಲ್ಲಿಸಿರುವ ಕಾರ್ಕಳ ಪುರಸಭಾ ಆಡಳಿತವು ಸಾಮಾನ್ಯ ಸಭೆಯ ಕಲಾಪದ ವರದಿ ಸಂಗ್ರಹಿಸಲು ಅವಕಾಶ ನೀಡದೇ ಇರುವ ಕುರಿತು ಶುಭದರಾವ್ ನೇತೃತ್ವದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಎದ್ದು ನಿಂತು ಪ್ರತಿಭಟನೆ ವ್ಯಕ್ತಪಡಿಸಿ ಭಿತ್ತಿ ಫಲಕವನ್ನು ಪ್ರದರ್ಶಿಸಿದರು.
ಘರ್ಷಣೆಯ ವಾತಾವರಣ ಇಲ್ಲದಿದ್ದರೂ ಸಾಮಾನ್ಯ ಸಭೆಗೆ ಪೊಲೀಸರನ್ನು ಕರೆಸುವ ಔಚಿತ್ಯ ಏನಿತ್ತು. ಚುನಾಯಿತರಾಗಿರುವ ಕೌನ್ಸಿಲರ್ಗಳು ಕ್ರಿಮಿನಲ್ ಗಳಲ್ಲ ಎಂದು ಸುಭದರಾವ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತನ್ನಿಂದ ಪ್ರಮಾದವಾಗಿದೆ ಎಂದು ತಪ್ಪೊಪ್ಪಿಕೊಂಡ ಮುಖ್ಯಾಧಿಕಾರಿ ಮುಂದಿನ ಸಾಮಾನ್ಯ ಸಭೆಯಲ್ಲಿ ಪತ್ರಕರ್ತರಿಗೆ ಗೌರವಯುವವಾಗಿ ಆಹ್ವಾನಿಸುವ ಭರವಸೆ ನೀಡಿದರು.
ಕರಿಯ ಕಲ್ಲಿನಲ್ಲಿರುವ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಸದೇ ಇರುವುದು ಹಾಗೂ ಅಲ್ಲಿ ಹೊತ್ತಿಕೊಂಡಿರುವ ಬೆಂಕಿಯ ಹೊಗೆಯಿಂದ ಪರಿಸರ ಮೇಲೆ ದುಷ್ಪರಿಣಾಮ ಬೀರುವಂತೆ ಮಾಡಿದೆ. ಬೆಂಕಿ ಹಾಕುವುದು ತ್ಯಾಜ್ಯ ವಿಲೇವಾರಿಗೆ ಪರಿಹಾರ ಅಲ್ಲ. ಸಮಸ್ಸೆ ಬಗೆ ಹರಿಸಲು ಹೋಗಿ ಇನ್ನೊಂದು ಸಮಸ್ಸೆ ಎದುರು ಹಾಕದಿರಿ ಎಂಬ ಸಲಹೆ ನೀಡಿದರು.
ಪೌರಕಾರ್ಮಿಕರು ಮಾನವರು, ಅವರನ್ನು ಗೌರವಿಸಿ. ಸ್ವಚ್ಚ ಕಾರ್ಕಳ ಸುಂದರ ಕಾರ್ಕಳ ಘೋಷ ವಾಕ್ಯ ಪರಿಪೂರ್ಣಕ್ಕೆ ಅವರ ಕೊಡುಗೆ ಅಪಾರವಾಗಿದೆ. ತ್ಯಾಜ್ಯ ಸಾಗಾಟದ ವಾಹನಗಳಿಗೆ ಫಿಟ್ನೆಸ್ ಪ್ರಮಾಣ ಪತ್ರ, ವಿಮೆ, ಹೊಗೆ ತಪಾಸಣೆ ದೃಡೀಕರಣ ಪತ್ರ ಮಾತ್ರವಲ್ಲದೇ ಇನ್ನೂ ಅಲ್ಲವು ನ್ಯೂನತೆಗಳು ಕಂಡುಬರುತ್ತದೆ. ಆ ವಾಹನದಿ ಯಾವುದೇ ತರದಲ್ಲಿ ಅನಾಹುತ ಸಂಭವಿಸಿದಲ್ಲಿ ಅದರಲ್ಲಿ ದುಡಿಯುವ ಪೌರಕಾರ್ಮಿಕ ಪರಿಸ್ಥಿತಿ ಏನಾಗಬದುದು ಎಂದು ಪ್ರಶ್ನಿಸಿದ ಸೋಮನಾಥ ನಾಯ್ಕ, ವಾಹನದ ಗುಣಮಟ್ಟದ ಹಾಗೂ ದಾಖಲೆ ಪತ್ರಗಳು ಸಮರ್ಪಕವಾಗಿ ಇರಲೇ ಬೇಕೆಂದು ಆಗ್ರಹಿಸಿದರು.
ಇನ್ನು ಕರಿಯಕಲ್ಲು ಸಾರ್ವಜನಿಕ ರುದ್ರಭೂಮಿಯ ನಿರ್ವಹಣೆಯು ಕಾರ್ಕಳ ಪುರಸಭೆಯಿಂದಲೇ ನಡೆಯಬೇಕೆಂದು ಶುಭದರಾವ್ ಸಭೆಯಲ್ಲಿ ಒತ್ತಾಯಿಸಿದ್ದಾರೆ.