ಬೆಳ್ತಂಗಡಿ, ಜ. 05 (DaijiworldNews/MB) : ಇಲ್ಲಿನ ಗುರುವಾಯನಕೆರೆ ಕೆರೆಯಲ್ಲಿ ಮಂಗಳವಾರ ಬೆಳಗ್ಗಿನ ಜಾವ ಸ್ಥಳೀಯರಿಗೆ ಅಪರಿಚಿತ ವ್ಯಕ್ತಿಯ ಶವವೊಂದು ಕೆರೆಯಲ್ಲಿ ಕೆಳಮುಖವಾಗಿ ತೇಲುತ್ತಿರುವುದು ಗಮನಕ್ಕೆ ಬಂದಿದ್ದು ಕೂಡಲೇ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿ ಶಾಮಕ ದಳದವರ ಸೂಕ್ತ ಕಾರ್ಯಾಚರಣೆಯಿಂದ ಶವವನ್ನು ಮೇಲಕ್ಕೆತ್ತಲಾಗಿದೆ. ಮೃತ ವ್ಯಕ್ತಿಯ ಬಟ್ಟೆಯ ಜೇಬಿನಲ್ಲಿ ಕಾಗದವೊಂದು ಲಭಿಸಿದೆ ಎಂದು ತಿಳಿದು ಬಂದಿದೆ.
ಈ ಕಾಗದದಿಂದ ವ್ಯಕ್ತಿ ಉಡುಪಿ ಮೂಲದವರು ಎಂದು ಹೇಳಲಾಗಿದೆ.
ಇನ್ನು ಇದು ಆತ್ಮಹತ್ಯೆ ಪ್ರಕರಣವೋ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಲಭಿಸಬೇಕಿದೆ.