ಮಂಗಳೂರು, ಜ.20 (DaijiworldNews/MB) : ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಕಂಕನಾಡಿ ಘಟಕದ ವತಿಯಿಂದ ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು.







ಈ ವೇಳೆ ಸಾರ್ವಜನಿಕರಿಗೆ ವ್ಯಾಪಾರಿಗಳು ಉಚಿತವಾಗಿ ಮಾಸ್ಕ್ ಹಾಗೂ ಸಿಹಿತಿಂಡಿ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಕಂಕನಾಡಿ ಘಟಕದ ಅಧ್ಯಕ್ಷ ಗೊಪಾಲ್ ಕುಲಾಲ್, ಕಾರ್ಯದರ್ಶಿ ಗಜಾನನ, ಮಾಜಿ ಅಧ್ಯಕ್ಷ ಅಣ್ಣಯ್ಯ ಕುಲಾಲ್, ಸದಸ್ಯರಾದ ರತ್ನ, ತಾರನಾಥ್, ಮೋನಪ್ಪ, ರಾಘವ್, ವಿನ್ಸಿ, ಕೃಷ್ಣಪ್ಪ ಪೂಜಾರಿ, ಅಶ್ರಫ್, ಪ್ರಕಾಶ್, ಬೀ ಕಾಂಚಿಜನ್, ಪ್ರವೀಣ್ ಕುಮಾರ್, ರಾಘು, ಅನಿಲ್, ಪ್ರವೀಣ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.