ಉಳ್ಳಾಲ, ಜ.24 (DaijiworldNews/HR): ಕೋಟ್ಯಂತರ ಹಿಂದೂಗಳಿಗೆ ನವಚೈತನ್ಯ ಕೊಟ್ಟಂತಹ ಭಗವಧ್ವಜ , ದೇವರನ್ನು ಪೂಜಿಸುವ ಪವಿತ್ರ ಸ್ಥಳದಲ್ಲಿ ಹೊಲಸು ಮಾಡುತ್ತಾರೆಂದರೆ ಅವರು ಅಪ್ಪನಿಗೆ ಹುಟ್ಟಿದವರಲ್ಲ, ತಾಯಿಯನ್ನೂ ಬಿಡದ ಹಡಬೆ ಸಂತಾನದವರು ಎಂದು ಹಿಂದೂ ಜಾಗರಣಾ ವೇದಿಕೆಯ ಕೇಂದ್ರೀಯ ಮಂಡಳಿ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಹೇಳಿದರು.



























ಹಿಂದೂ ಜನಜಾಘರತಿ ಸಮಿತಿ ಕೊಣಾಜೆ ವತಿಯಿಂದ ಕೊಣಾಜೆ ಪರಿಸರದಲ್ಲಿ ಕಳೆದ ಕೆಲವು ಸಮಯಗಳಿಂದ ನಡೆಯುತ್ತಿರುವ ಹಿಂದೂ ವರೋಧಿ ಕೃತ್ಯ ಹಗೂ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುತ್ತಿರುವ ವಿರುದ್ಧ ಕೊಣಾಜೆ ಪೊಲೀಸ್ ಠಾಣೆ ಮುಂದೆ ಭಾನುವಾರ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುವ ವ್ಯವಸ್ಥೆ ನಿರಂತರವಾಗಿ ನಡೆಯುತ್ತಿದೆ. ಮತಾಂತರಿಗಳು ಬಹುಸಂಖ್ಯಾತರಾದ ಪ್ರದೇಶಗಳಲ್ಲಿ ಹಿಂದೂಗಳ ವಿರುದ್ಧ ನೀಚ ಕೃತ್ಯಗಳು ನಡೆಯುತ್ತಲೇ ಇದೆ. ಕೊಣಾಜೆಯಲ್ಲಿ ಕೃತ್ಯ ನಡೆಸಿದ ಆರೋಪಿಗಳನ್ನು ಬಂಧಿಸುವ ಮೂಲಕ ಕೃತ್ಯ ಎಸಗಿರುವವನ ಇತಿಹಾಸ ತಿಳಿಯಬೇಕಿದೆ" ಎಂದರು.
"ಕ್ರೈಸ್ತ, ಮುಸ್ಲಿಂ, ಹಿಂದೂಗಳಿಗೆ ಹಾಲು ಕೊಡವುದು ಗೋವು. ಇಲ್ಲಿ ಗೋವು ಮಾತ್ರ ಸೆಕ್ಯುಲರಿಸಂ , ಉಳಿದದ್ದೆಲ್ಲಾ ಡೋಂಗಿ ಸೆಕ್ಯುಲರಿಸಂ. ದೇಶದ ಪವಿತ್ರ ಮಣ್ಣಿನ ಗುಣದ ಸಂಸ್ಕೃತಿ, ಮೌಲ್ಯಗಳನ್ನು ಹಾಳುಗೆಡವಲು ಶಿಕ್ಷಣ ಜಿಹಾದ್, ಲವ್ ಜಿಹಾದ್, ವ್ಯಾಪಾರಿ ಜಿಹಾದ್, ಲ್ಯಾಂಡ್ ಜಿಹಾದ್, ರಾಜಕೀಯ ಜಿಹಾದ್, ಗೋಹತ್ಯೆಯಂತಹ ನೀಚ ಕೃತ್ಯಗಳನ್ನು ಎಸಗಿ ಹಿಂದೂ ಸಮಾಜವನ್ನು ತಲೆತಗ್ಗಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಹಿಂದೂ ಸಮಾಜಕ್ಕೆ ಅಪಮಾನ ಆಗುವ ಉದ್ದೇಶದಿಂದ ಕೃತ್ಯ ಎಸಗಲಾಗುತ್ತಿದೆ. ಹಿಂದೂಗಳು ಸ್ವರ್ಗಕ್ಕೆ ಹೋಗಲು ಪುಣ್ಯ ಕಾರ್ಯ ಮಾಡುತ್ತಾರೆ , ಆದರೆ ಕೆಲವರು ನೀಚ ಕಾರ್ಯಗಳನ್ನು ಮಾಡಿ ಸ್ವರ್ಗದ ಕನಸ್ಸನ್ನು ಹೊತ್ತುಕೊಂಡಿದ್ದಾರೆ. ಅಯೋಧ್ಯೆ ತೀರ್ಪಿಗೆ 492 ವರ್ಷಗಳು ಕಾದಿದ್ದೇವೆ. ನಂಬಿಕೆಯೇ ನ್ಯಾಯಾಲಯ, ರಾಮನೇ ನ್ಯಾಯಧೀಶನಾದರೂ ಹಿಂದೂಗಳು ಸಹಿಷ್ಣು ಸ್ವಭಾವದವರಾಗಿದ್ದರಿಂದ ಸಂವಿಧಾನಬದ್ಧವಾದ ನ್ಯಾಯಾಲಯದ ತೀರ್ಪಿಗೆ ಕಾದೆವು. ಚೆಂದ ಇರುವುದೆಲ್ಲವನ್ನೂ ಹಾಳುಗೆಡವುದು ಭಯೋತ್ಪಾದಕ ಶಕ್ತಿಗಳ ಉದ್ದೇಶ. ಹಿಂದೂ ಸಮಾಜದ ಹೆಣ್ಮಕ್ಕಳಾಗಲಿ, ದೇವಸ್ಥಾನಗಳಾಗಲಿ, ಜಾನುವಾರುಗಳು ನೋಡಲು ಚೆಂದ ಇರುವುದರಿಂದ ಅವರನ್ನೇ ಹಾಳು ಮಾಡುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಹಿಂದೂ ಸಮಾಜದಲ್ಲಿದ್ದ ಹೇಡಿಗಳು, ಕಾಮುಕರು, ಸ್ವಾರ್ಥಿಗಳು ಮಾತ್ರ ಮತಾಂತರಗೊಂಡಿದ್ದಾರೆ. ಸ್ವಂತ ತಂದೆಗೆ ಹುಟ್ಟಿದವನಾಗಿದ್ದಲ್ಲಿ ಹಗಲು ಹೊತ್ತಿನಲ್ಲಿ ಹಿಂದೂಗಳ ಭಾವನೆಗಳಿಗೆ ಘಾಸಿ ಉಂಟು ಮಾಡಿ ತೋರಿಸಲಿ ಎಂದು ಎಚ್ಚರಿಸಿದ ಅವರು ಒಂದು ವಾರದ ಒಳಗೆ ಪಾತಕಿಗಳನ್ನು ಪೊಲೀಸರು ಪತ್ತೆಹಚ್ಚದೇ ಇದ್ದಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಸುತ್ತೇವೆ" ಎಂದರು.
ಇನ್ನು "ವಾಟ್ಸ್ಯಾಪ್ ನಲ್ಲಿ ಇತರೆ ಧರ್ಮಗಳನ್ನು ಅವಹೇಳನ ನಡೆಸಿದವರನ್ನು ಬಂಧಿಸಲಾಗುತ್ತದೆ. ಇತರೆ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟಾದರೆ ಕೆ.ಜೆ ಹಳ್ಳಿ, ಡಿ.ಜೆ ಹಳ್ಳಿ ಹೊತ್ತಿ ಉರಿಯುತ್ತದೆ. ಅಲ್ಲಿ ಮನೆಯೊಳಕ್ಕೆ ನುಗ್ಗಿ ದಾಂಧಲೆ ನಡೆಸಿದಂತೆ ಮಂಗಳೂರಿನಲ್ಲಿ ನಡೆಯಬಾರದು . ಹಿಂದೂಗಳೇ ಎಚ್ಚರವಾಗಿರಿ ಹಿಂದೂ ಸಮಾಜವನ್ನು ಕೆಣಕುವವರೇ, ಕದ್ದು ಕೆಲಸ ಮಾಡದಿರಿ. ಹಿಂದೂಗಳ ನಂಬಿಕೆಗಳಿಗೆ ಗೌರವ ಕೊಡಿ. ಹಾವು ಕಚ್ಚಿದಲ್ಲಿ ಮದ್ದಿದೆ, ಅದರೆ ಮಣ್ಣಿಗೆ ಕಚ್ಚಿದಲ್ಲಿ ಮದ್ದಿಲ್ಲ. ಅವರು ಮಣ್ಣು ಪಾಲೇ ಆಗುತ್ತಾರೆ. ಅನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ" ಎಂದು ಹೇಳಿದ್ದಾರೆ.
ಈ ವೇಳೆ ಕೊಣಾಜೆಯ ಆರ್ಎಸ್ಎಸ್ ಮುಖಂಡ ವರದರಾಜ್ ಬೊಳ್ಳಕುಮೇರ್ ಉಪಸ್ಥಿತರಿದ್ದರು.
ಠಾಣೆ ಮುಂದೆ 100ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದು, ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚುವಂತೆ ಪ್ರತಿಭಟನಾಕಾರರಿಂದ ಮನವಿ ಸಲ್ಲಿಸಲಾಯಿತು.