ಬಂಟ್ವಾಳ, ಜ.26 (DaijiworldNews/MB) : ''ಸಾರ್ವಜನಿಕರು ಮನೆ ಕಟ್ಟಲು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆ ಕೆಂಪು ಕಲ್ಲು ಕೋರೆ ಶೀಘ್ರವಾಗಿ ತೆರೆಯಬೇಕು'' ಎಂದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಆಗ್ರಹಿಸಿದರು.

ಬಂಟ್ವಾಳ ಬಂಟ್ವಾಳ ತಾಲೂಕಿನಾದ್ಯಾಂತ ಕೆಂಪು ಕಲ್ಲು ಕೊರೆ ಸ್ಥಗಿತಗೊಂಡು ಸಾರ್ವಜನಿಕರು ಮನೆ ಕಟ್ಟಲು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಕೆಂಪು ಕೋರೆ ಲೈಸನ್ಸ್ದಾರರ ಜೊತೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸಕ್ರಮವಾಗಿ ಕೆಂಪು ಕಲ್ಲು ಕೋರೆಗೆ ತಕ್ಷಣ ಪರವಾನಿಗೆ ನೀಡುವಂತೆ ರಮಾನಾಥ ರೈ ಯವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಪದ್ಮನಾಭ ಕೋಟ್ಯಾನ್ ಉಪಸ್ಥಿತರಿದ್ದರು.