ಮಂಗಳೂರು, ಫೆ.14 (DaijiworldNews/PY): ತೊಕ್ಕೊಟ್ಟು ರೈಲ್ವೆ ಹಳಿಯ ಬಳಿ ಬ್ಯಾಂಕ್ ಉದ್ಯೋಗಿಯೋರ್ವರ ಶವ ಪತ್ತೆಯಾಗಿದ್ದು, ಆತ್ನಹತ್ಯೆ ಎಂದು ಶಂಕಿಸಲಾಗಿದೆ.

ಮೃತರನ್ನು ಮದ್ದೂರು ನಿವಾಸಿ ಸತೀಶ್ ಚಂದನ್ ಎಂದು ಗುರುತಿಸಲಾಗಿದೆ. ಫೆ.14ರ ರವಿವಾರದಂದು ಅವರು ತೊಕ್ಕೊಟ್ಟು ಎಂಬಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ತೊಕ್ಕೊಟ್ಟು ರೈಲ್ವೆ ಹಳಿಯ ಬಳಿ ಸತೀಶ್ ಚಂದನ್ ಅವರ ಶವ ಪತ್ತೆಯಾಗಿದ್ದು, ಚಲಿಸುತ್ತಿರುವ ರೈಲಿನ ಮುಂದೆ ನಿಂತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಸತೀಶ್ ಚಂದನ್ ಅವರು ಮಡಿಕೇರಿಯ ಬ್ಯಾಂಕ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಘಟನೆಯ ಬಗ್ಗೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.