ಉಡುಪಿ, ಮಾ. 05 (DaijiworldNews/SM): ದೈನಂದಿನ ಕಾರ್ಯಗಳಲ್ಲಿ ತಂತ್ರಜ್ಞಾನದ ಬಳಕೆಯ ಜೊತೆಗೆ ಅವುಗಳ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡುವುದು ಅವಶ್ಯವೆಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.

ಅವರು ಇಂದು ನಗರದ ಮಣಿಪಾಲ್ನ ಜಿಲ್ಲಾ ಪಂಚಾಯತ್ನ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಆಡಳಿತ ತರಬೇತಿ ಸಂಸ್ಥೆ, ಇ-ಆಡಳಿತ ಕೇಂದ್ರ ಬೆಂಗಳೂರು, ಇ- ಆಡಳಿತ ದತ್ತಾಂಶಕೇಂದ್ರ ಮೈಸೂರುಇವರ ಸಹಯೋಗದೊಂದಿಗೆ ಸಾಮಥ್ರ್ಯ ಸಂಘಟನೆಯೋಜನೆಯಅಡಿಯಲ್ಲಿ ಸೈಬರ್ ಸೆಕ್ಯೂರಿಟಿ ಮತ್ತು ಇ- ಆಡಳಿತ ವಿಷಯಗಳ ಕುರಿತಒಂದು ದಿನದಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಾಹಿತಿತಂತ್ರಜ್ಞಾನದ ಬಳಕೆ ದೈನಂದಿನ ಜೀವನದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ.ಕೆಲವರುಇದರದುರುಪಯೋಗ ಪಡಿಸಿಕೊಂಡು ದೇಶದಯಾವುದೋ ಮೂಲೆಯಲ್ಲಿ ಕುಳಿತು ಅಮಾಯಕರ ಬ್ಯಾಂಕ್ ಖಾತೆಗಳಿಗೆ ಖನ್ನಾ, ಇ-ಮೇಲ್ ಐ.ಡಿ.ಗಳ ಹ್ಯಾಕ್, ಜಾಲತಾಣಗಳ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.ಇವುಗಳಿಗೆ ಕಡಿವಾಣ ಹಾಕಲು ಸೈಬರ್ ಸೆಕ್ಯೂರಿಟಿಗಳ ಮಾಹಿತಿ ಹೊಂದಿ ಸುರಕ್ಷತೆಗೆಆದ್ಯತೆ ನೀಡುವುದು ಒಳಿತು ಎಂದರು.
ಯಾವುದೇಓರ್ವಅಪರಿಚಿತ ವ್ಯಕ್ತಿಯ ಹೆಸರಿನಿಂದ ಮೇಲ್ಅಥವಾ ಸಂದೇಶಗಳು ಬಂದರೆ ಅವುಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು, ತಪ್ಪಿದ್ದಲ್ಲಿ ಅವುಗಳ ತೆರೆಯುವಿಕೆಯಿಂದ ವೈರಸ್ ಹರಡಿ ದತ್ತಾಂಶಗಳು ಹಾಳಾಗುವ ಸಾಧ್ಯತೆಇರುತ್ತದೆಎಂದರು. ಎಚ್ಚೆತ್ತಿರುವ ಸೈಬರ್ ಅಪರಾಧಿಗಳ ತಡೆಗೆ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಸೈಬರ್ಅಪರಾಧಿತಡೆ ತಾಣಗಳನ್ನು ತೆರೆಯಲಾಗಿದೆ.ಮುಂದಿನ ದಿನಗಳಲ್ಲಿ ತಾಲೂಕುಗಳಿಗೂ ವಿಸ್ತರಣೆಯಾಗುವ ಸಾಧ್ಯತೆಇದೆಎಂದರು.ಕಚೇರಿಯಲ್ಲಿ ಬಳಸುವ ಗಣಕಯಂತ್ರಗಳಿಗೆ ವೈರಸ್ ನಿರೋಧಕ ತಂತ್ರಾಂಶಗಳನ್ನು ತಪ್ಪದೇ ಅಳವಡಿಸಬೇಕು.ಈ ಬಗ್ಗೆ ನಿರ್ಲಕ್ಷ ತಾಳಬಾರದು ಎಂದರು.
ಎನ್.ಐ.ಟಿ.ಕೆಕಾಲೇಜಿನಕಂಪ್ಯೂಟರ್ ವಿಜ್ಞಾನ ಮತ್ತುಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಅಲ್ವಿನ್ರೋಶನ್ ಪೈಸ್ ಮಾತನಾಡಿ, ಆನ್ಲೈನ್ನಲ್ಲಿ ವ್ಯವಹಾರ ಹೆಚ್ಚಿದಂತೆಸುರಕ್ಷತೆ ಮತ್ತುಜಾಗೃತಿಇಲ್ಲದೇ ಹಣ ಕಳೆದುಕೊಳ್ಳುತ್ತಿರುವವರು ಹೆಚ್ಚುತ್ತಿದ್ದಾರೆ.
ಯಾವುದೋಉದ್ದೇಶಕ್ಕೆಇಟ್ಟುಕೊಂಡ ಹಣ ಕಳೆದುಕೊಂಡು ಅಮಾಯಕರಾಗಿಜನರುಕಂಗಾಲಾಗುತ್ತಿದ್ದಾರೆ.ಕಳೆದುಕೊಂಡ ಹಣ ಮರಳಿ ಸಿಗುವುದು ತೀರ ವಿರಳ ಎಂದರು.
ವೆಬ್ಸೈಟ್ಗಳನ್ನು ರೂಪಿಸುವ ಸುರಕ್ಷತಾ ಕ್ರಮಗಳಿಗೂ ಹೆಚ್ಚಿನ ಗಮನ ಹರಿಸಬೇಕು.ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಂ ಗಳಲ್ಲಿ ಪಾಸ್ವರ್ಡ್ಗಳನ್ನು ನಿರಂತರವಾಗಿ ಬದಲಾಯಿಸುತ್ತಿರುವುದುಅತೀಅಗತ್ಯಎಂದರು.