ಉಡುಪಿ, ಮಾ18 (DaijiworldNews/MS): ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಿರಂಜನ್ ಭಟ್ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪ್ರಕರಣವನ್ನು ಒಂದು ತಿಂಗಳೊಳಗೆ ಇತ್ಯರ್ಥಪಡಿಸುವಂತೆ ಸೂಚನೆ ನೀಡಿದೆ.

ಇತ್ಯರ್ಥವಾಗದಿದ್ದರೆ, ನಿರಂಜನ್ ಭಟ್ ಗೆ ಜಾಮೀನು ಮಂಜೂರು ಮಾಡುವಂತೆ ಆದೇಶಿಸಿದೆ. ಈ ಪ್ರಕರಣದ ಮುಂದುವರಿದ ಭಾಗವಾಗಿ ಮಂಗಳವಾರ ಉಡುಪಿ ನ್ಯಾಯಾಲಯದಲ್ಲಿ ಸಾಕ್ಷಿದಾರರ ವಿಚಾರಣೆ ನಡೆಸಲಾಯಿತು. ಹಿಂದಿನ ಎಸ್ಪಿ ಆಗಿದ್ದ ಸುಮನಾ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಸಿಐಡಿ ತನಿಖಾಧಿಕಾರಿ ಚಂದ್ರಶೇಖರವರ ವಿಚಾರಣೆ ಮಾರ್ಚ್ 25ರಂದು ನಡೆಯಲಿದೆ. ಬಳಿಕ ಇನ್ನೋರ್ವ ಸಾಕ್ಷಿದಾರ ವಿವೇಕಾನಂದ ಶೆಟ್ಟಿ ಅವರ ವಿಚಾರಣೆಯೂ ಆ ಬಳಿಕ ನಡೆಯಲಿದೆ. ವಾದ-ಪ್ರತಿವಾದಗಳು ನಡೆದು ಪ್ರಕರಣ ತಿಂಗಳೊಳಗೆ ವ್ಯಕ್ತಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಹಿರಿಯ ವಕೀಲ ಶಾಂತರಾಮ್ ಶೆಟ್ಟಿ ಅವರು ತಿಳಿಸಿದ್ದಾರೆ