ಕುಂದಾಪುರ, ಮಾ. 18 (DaijiworldNews/SM): ಗುಲ್ಲಾಡಿ ಗ್ರಾಮದ ಮಂಜಿ ಎನ್ನುವವರ ತೀರ ಬಡ ಕುಟುಂಬದ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ 3 ತಿಂಗಳ ಗರ್ಭ ಧರಿಸಿದ್ದ ಗೋವನ್ನು ರಾತ್ರಿ ಸಮಯದಲ್ಲಿ ಕೊಟ್ಟಿಗೆಗೆ ನುಗ್ಗಿದ ಕಟುಕರು ಹಗ್ಗವನ್ನು ಕೊಯ್ದು ಕದ್ದೊಯ್ದಿರುವ ಘಟನೆ ನಡೆದಿದೆ.

ಮಂಜಿಯವರು ತೀರ ಬಡ ಕುಟುಂಬದವರಾಗಿದ್ದು ತಮ್ಮ ಸೊಸೆ ಮತ್ತು ಮೊಮ್ಮಗಳೊಂದಿದೆಗೆ ವಾಸವಿದ್ದಾರೆ. ತಮ್ಮ ಜೀವನೋಪಾಯಕ್ಕೆ ಹೈನುಗಾರಿಕೆಯನ್ನು ನಂಬಿಕೊಂಡಿದ್ದು ಇದೀಗ ಇದ್ದ ಒಂದು ಗೋವು ಕಳ್ಳತನವಾದುದರಿಂದ ಕುಟುಂಬಕ್ಕೆ ದಾರಿ ಕಾಣದಂತಾಗಿದೆ.
ಈ ಕುರಿತು ಕೋಟ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.