ಉಡುಪಿ, ಏ.01 (DaijiworldNews/HR): "ಸಾರ್ವಜನಿಕರು ತಮ್ಮ ತಂದೆ ತಾಯಿಗೆ ಕೊರೊನಾ ಲಸಿಕೆಯನ್ನು ಕೊಡಿಸಬೇಕು" ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್. ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ನಲ್ಲಿ ವಿಡಿಯೋವೊಂದನ್ನು ಹಾಕಿರುವ ಅವರು, "ನಾವೆಲ್ಲರೂ ಚಿಕ್ಕವರಿರುವಾಗ ತಂದೆ ತಾಯಿ ಮಕ್ಕಳಿಗೆ ಲಸಿಕಾ ಹಾಕಿಸುತ್ತಾ ಇದ್ದರು. ಸಾರ್ವಜನಿಕ ತಮ್ಮ ತಂದೆ ತಾಯಿಗೆ ಲಸಿಕೆಯನ್ನು ಕೊಡಿಸಿ. ಯಾಕೆಂದರೆ ತಂದೆ-ತಾಯಿ ರೋಗದಿಂದ ಮಕ್ಕಳ ರಕ್ಷಣೆಯನ್ನು ಮಾಡಿದ್ದಾರೆ" ಎಂದರು.
ಇನ್ನು ಕೊರೊನಾ ಬಾಧಿತರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರಾಗಿದ್ದು, ನಾನು ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಉಡುಪಿಯ ಜನತೆಯೂ ತಮ್ಮ ಜವಾಬ್ದಾರಿ ನಿರ್ವಹಿಸಿ" ಎಂದು ಮನವಿ ಮಾಡಿಕೊಂಡಿದ್ದಾರೆ.