ಮಂಗಳೂರು, ಎ.09 (DaijiworldNews/PY): ತಣ್ಣೀರು ಬಾವಿಯಿಂದ ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ಎಪ್ರಿಲ್ 8ರ ಗುರುವಾರ ನಾಪತ್ತೆಯಾಗಿದ್ದಾರೆ.\

ತಣ್ಣೀರುಬಾವಿಯ ದಾವೂದ್ ಸಿದ್ದಿಕ್ (39) ಕಾಣೆಯಾದ ಮೀನುಗಾರ ಎಂದು ತಿಳಿದುಬಂದಿದೆ.
ಗುರುವಾರ ಪೂರ್ವಾಹ್ನ 11.20ಎ ವೇಳೆಗೆ ಪಣಂಬೂರು ಕಡಲ ತೀರದಿಂದ ಅರಬ್ಬೀ ಸಮುದ್ರದಲ್ಲಿ ಸುಮಾರು 14 ನಾಟಿಕಲ್ ದೂರದಲ್ಲಿ ಈ ಘಟನೆ ನಡೆದಿದೆ.
ನಾಡದೋಣಿಯಲ್ಲಿ ಸುಮಾರು 6 ಮಂದಿ ಇದ್ದು, ದಾವೂದ್ ಸಿದ್ದಿಕ್ ಮೀನು ಹಿಡಿಯುವ ಸಂದರ್ಭ ಕಾಣೆಯಾಗಿದ್ದಾರೆ. ಇವರು ಕಳೆದ 15 ವರ್ಷದಿಂದ ಮೀನುಗಾರಿಕೆಯಲ್ಲಿ ತೊಡಗಿದ್ದರು. ಇವರು ತಣ್ಣೀರುಬಾವಿಯ ಮುಳುಗು ರಕ್ಷಣಾ ತಂಡದ ಸದಸ್ಯರೂ ಆಗಿದ್ದರು.
ಘಟನೆಯ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.