ಮಂಗಳೂರು, ಏ.11 (DaijiworldNews/HR): ಮೂರು ದಿನಗಳ ಹಿಂದೆ ತನ್ನೀರು ಬಾವಿಯಿಂದ ದೋಣಿ ಮೀನುಗಾರಿಕೆಯ ವೇಳೆ ನಾಪತ್ತೆಯಾಗಿದ್ದ ಮೀನುಗಾರನ ಶವ ಏಪ್ರಿಲ್ 11 ರಂದು ಮಂಜೇಶ್ವರ ಕಡಲ ತೀರದಿಂದ ಪತ್ತೆಯಾಗಿದೆ.
![](https://daijiworld.ap-south-1.linodeobjects.com/iWeb/tvdaijiworld/img_tv247/hr-110421-thannirvhavi.jpg)
ಮೃತಪಟ್ಟ ಮೀನುಗಾರನನ್ನು ತನ್ನೀರು ಬಾವಿಯ ದಾವೂದ್ ಸಿದ್ದೀಕ್ (39) ಎಂದು ಗುರುತಿಸಲಾಗಿದೆ.
ದಾವೂದ್ ಅವರು ಇತರ ಐದು ಮೀನುಗಾರರೊಂದಿಗೆ ತನ್ನೀರ್ಬಾವಿಯಿಂದ ಮೀನುಗಾರಿಕೆಗೆ ಹೊರಟಿದ್ದು, ಗುರುವಾರ ಬೆಳಿಗ್ಗೆ 11.30 ರ ಸುಮಾರಿಗೆ ಅವರು ಅರಬ್ಬಿ ಸಮುದ್ರದಲ್ಲಿರುವ ಪಣಂಬೂರು ಸಮುದ್ರ ತೀರದಿಂದ ಸುಮಾರು 14 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ನಾಪತ್ತೆಯಾದ ಮೀನುಗಾರರ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಇಂದು ಬೆಳಿಗ್ಗೆ ತಲಪಾಡಿ ಮತ್ತು ಮಂಜೇಶ್ವರ ನಡುವಿನ ಸಮುದ್ರ ತೀರದಿಂದ ಸುಮಾರು 14 ನಾಟಿಕಲ್ ಮೈಲು ದೂರದಲ್ಲಿ ತೇಲುತ್ತಿರುವ ಮೀನುಗಾರರ ಶವ ಪತ್ತೆಯಾಗಿದೆ. ಸ್ಥಳೀಯ ಮೀನುಗಾರರು ಶವವನ್ನು ಸಮುದ್ರ ತೀರಕ್ಕೆ ತಂದಿದ್ದು, ಅಲ್ಲಿಂದ ಶವವನ್ನು ಆಂಬ್ಯುಲೆನ್ಸ್ ಮೂಲಕ ನಗರಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ದಾವೂದ್ ಕಳೆದ 15 ವರ್ಷಗಳಿಂದ ಮೀನುಗಾರಿಕೆಯಲ್ಲಿ ತೊಡಗಿದ್ದರು.