ಮಂಗಳೂರು, ಸೆ 16 (MSP): ಹಿಂದೂಗಳು ಶ್ರದ್ಧಾಭಕ್ತಿಯಿಂದ ಪೂಜಿಸುವ ಸಾರ್ವಜನಿಕ ಶ್ರೀ ಗಣಪತಿ ದೇವರಿಗೆ ಕ್ರೈಸ್ತ ಬಾಂಧವರು ಹೂ-ಹಣ್ಣುಹಂಪಲು ಅರ್ಪಿಸಿ ಧರ್ಮ ಸಾಮರಸ್ಯಕ್ಕೆ ಮುನ್ನುಡಿ ಬರೆದ ಅಪರೂಪದ ಘಟನೆ ಸೆ. 16 ರ ಭಾನುವಾರ ನಗರದಲ್ಲಿ ನಡೆಯಿತು.
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
ಆರೆಸ್ಸೆಸ್ ಕೇಂದ್ರ ಕಚೇರಿ, ಪ್ರತಾಪನಗರದ ಸಂಘನಿಕೇತನದಲ್ಲಿ ನಡೆಯುತ್ತಿರುವ 71 ನೇ ಸಾರ್ವಜನಿಕ ಗಣೇಶೋತ್ಸವದ ವೇಳೆ, ಆಗಮಿಸಿದ ಆಶೋಕ ನಗರದ ಸಿಸ್ಟರ್ಸ್ ಆಫ್ ಸೈಂಟ್ ಜೋಸೇಫ್ ಕಾನ್ವೆಂಟ್ ನ ಧರ್ಮ ಭಗಿನಿಯರಾದ , ಜ್ಯೋತಿ, ಅನಿತಾ, ರೋಸಾ,ಸುಜಾತ ಮುಂತಾದವರು ಗಣಪನಿಗೆ ವಂದಿಸಿ, ಹೂವು ಹಣ್ಣುಗಳನ್ನು ಅರ್ಪಿಸಿದರು. ಈ ಸಂದರ್ಭ ಕ್ಯಾಥಲಿಕಾ ಸಭಾ ದ ಕಾರ್ಯದರ್ಶಿ, ಸೆಲೆಸ್ಟಿನ್ ಡಿ ಸೋಜಾ ಹಾಗೂ ಕ್ಯಾಥಲಿಕ್ ಸಮುದಾಯದ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕ್ರೈಸ್ತ ಧರ್ಮಭಗಿನಿಯರನ್ನು ಆಧಾರದಿಂದ ಸ್ವಾಗತಿಸಿದ ಸಾರ್ವಜನಿಕ ಗಣೇಶೋತ್ಸವ ಕಮಿಟಿ ಸದಸ್ಯರು, ಶ್ರೀ ಮಹಾ ಗಣಪನಿಗೆ ವಿಶೇಷ ಪೂಜೆಯ ಪ್ರಸಾದ ವಿತರಿಸಿದರು.
ಇದೇ ವೇಳೆ ಮಾತನಾಡಿದ ಕ್ಯಾಥಲಿಕಾ ಸಭಾ ದ ಕಾರ್ಯದರ್ಶಿ, ಸೆಲೆಸ್ಟಿನ್ ಡಿ ಸೋಜಾ, ಜಗತ್ತಿನಲ್ಲಿ ಧರ್ಮ ಸಾಮರಸ್ಯ ಅನಿವಾರ್ಯ. ಈ ಭೇಟಿಯೂ ಕೂಡಾ ಸಾಮರಸ್ಯ, ಸೌಹಾರ್ದತೆಯ ಸಂಕೇತವಾಗಿದೆ . ಸಾಮರಸ್ಯ ಬೆಳೆಯಲೂ ಒಬ್ಬರು ಇನ್ನೊಬ್ಬರನ್ನು ಪ್ರೀತಿಸುವ ಸಂಪ್ರದಾಯ ಗಟ್ಟಿಯಾಗಬೇಕು. ಎಲ್ಲೆಡೆ ಪ್ರೀತಿ, ಸಾಮರಸ್ಯದ ವಾತಾವರಣ ತುಂಬಿ ಬರಲಿ ಎಂದು ಹಾರೈಸಿದರು.