ಮಂಗಳೂರು, ಎ.19 (DaijiworldNews/PY): ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನಲ್ಲಿ ಎಪ್ರಿಲ್ 19ರ ಸೋಮವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
![](https://daijiworld.ap-south-1.linodeobjects.com/iWeb/tvdaijiworld/img_tv247/PY-190421-bajpe.jpg)
ಎ.ಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆದ ಕಾರಣ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.
"ಅಗ್ನಿ ಅವಘಡದಿಂದ ಯಾವುದೇ ದಾಖಲೆ ಪತ್ರಗಳಿಗೆ ಹಾನಿಯಾಗಿಲ್ಲ. ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದೇವೆ. ಅರ್ಧಗಂಟೆಯೊಳಗೆ ಬೆಂಕಿ ನಂದಿಸಿದ ಕಾರಣ ಭಾರೀ ಅನಾಹುತ ತಪ್ಪಿದೆ. ಬ್ಯಾಂಕ್ನ ಕಟ್ಟಡಕ್ಕೆ ಗಾಜಿನ ಇಂಟೀರಿಯರ್ ಅಳವಡಿಸಿದ ಕಾರಣ, ಬ್ಯಾಂಕ್ನ ಒಳಗಡೆ ದಟ್ಟ ಹೊಗೆ ಕಾಣಿಸಿದ್ದು, ಹಾಗಾಗಿ ಗಾಜನ್ನು ಒಡೆಯಲಾಯಿತು" ಎಂದು ಬ್ಯಾಂಕ್ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು ತಿಳಿಸಿದ್ದಾರೆ.