ಮಂಗಳೂರು, ಏ 28 (DaijiworldNews/MS): ನಗರದ ಹೊರವಲಯದ ಅಡ್ಯಾರ್ ಬಳಿ 2019ರ ಫೆಬ್ರವರಿಯಲ್ಲಿ ನಡೆದಿದ್ದ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಹಣ ಸುಲಿಗೆ ಪ್ರಕರಣದ ಅಪರಾಧಿಗೆ ನ್ಯಾಯಾಲಯ 12 ವರ್ಷ ಕಠಿಣ ಸಜೆ ಹಾಗೂ 1.10 ಲ.ರೂ ದಂಡ ವಿಧಿಸಿ ತೀರ್ಪು ನೀಡಿದೆ.
![](https://daijiworld.ap-south-1.linodeobjects.com/iWeb/tvdaijiworld/img_tv247/ms-010321-judge.jpg)
ಪ್ರಕರಣದ ವಿಚಾರಣೆ ನಡೆಸಿದ ನಗರದ ಹೆಚ್ಚುವರಿ ಸತ್ರ ಹಾಗೂ ಎಫ್ ಟಿ ಎಸ್ ಸಿ ಐ(ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ಅವರು ಪ್ರಕರಣದ ಅಪರಾಧಿ ವಳಚ್ಚಿಲ್ ಪದವಿನ ನಝೀರ್(35) ಎಂಬವನಿಗೆ 12 ವರ್ಷ 6 ತಿಂಗಳು ಕಠಿಣ ಸಜೆ ಮತ್ತು 1.10 ಲ.ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ( ಪೋಕ್ಸೊ) ವೆಂಕಟರಮಣ ಸ್ವಾಮಿ ಸಿ. ಅವರು ವಾದಿಸಿದ್ದರು.
ನಝೀರ್ ಜತೆ ಇದ್ದು ಆತನಿಗೆ ಸಹಕರಿಸಿದ್ದ ವಳಚ್ಚಿಲ್ ನ ಶಮೀರ್ ಗೆ ನ್ಯಾಯಾಲಯ 6 ತಿಂಗಳ ಕಠಿಣ ಸಜೆ ಹಾಗೂ ೩೦೦೦೦ ದಂಡ ವಿಧಿಸಿದೆ. ಸಂತ್ರಸ್ತೆ ವಿದ್ಯಾರ್ಥಿನಿ ಹಾಗೂ ಇನ್ನೋರ್ವ ವಿದ್ಯಾರ್ಥಿ ಮಧ್ಯಾಹ್ನ ಅಡ್ಯಾರ್ ಸಮೀಪ ಗುಡ್ಡದ ಪಕ್ಕ ಬಂಡೆಕಲ್ಲಿನಲ್ಲಿ ಕುಳಿತಿದ್ದಾಗ ಅತ್ಯಾಚಾರ ನಡೆದಿತ್ತು. ಅವರಿಂದ ಹಣ ಸುಲಿಗೆ ಕೂಡ ಮಾಡಲಾಗಿತ್ತು.
ದಂಡದ ಮೊತ್ತ್ದಲ್ಲಿ 1 ಲ.ರೂ. ಹಾಗೂ ಕಾನೂನು ಸೇವಾ ಪ್ರಾಧಿಕಾರವು 2. ಲ.ರೂ ಸಂತ್ರಸ್ತೆಗೆ ಪರಿಹಾರವಾಗಿ ನೀಡುವಂತೆ ಆದೇಶಿಸಲಾಗಿದೆ.