ಮಂಗಳೂರು, ಮೇ 14 (DaijiworldNews/SM): ಕಳೆದ ವಾರದ ದ.ಕ. ಜಿಲ್ಲೆಯಲ್ಲಿ ಶನಿವಾರ ಹಾಗೂ ರವಿವಾರಗಳಂದು ವೀಕೆಂಡ್ ಕರ್ಪ್ಯೂ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲೆ ಸಂಪೂರ್ಣ ಸ್ತಬ್ದಗೊಂಡಿತ್ತು. ತುರ್ತು ಸೇವೆ ಹೊರತುಪಡಿಸಿ ಎಲ್ಲವೂ ಬಂದ್ ಆಗಿತ್ತು. ಆದರೆ, ಈ ವಾರಾಂತ್ಯದಿಂದ ವೀಕೆಂಡ್ ಕರ್ಫ್ಯೂ ಮುಕ್ತಗೊಳಿಸಲಾಗಿದೆ. ಈ ಕಾರಣದಿಂದಾಗಿ ಶನಿವಾರ ಹಾಗೂ ರವಿವಾರಗಳಂದು ಬೆಳಗ್ಗೆ 9 ಗಂಟೆಯ ತನಕ ಅಗತ್ಯ ವಸ್ತುಗಳು ಲಭ್ಯವಾಗಿರಲಿದೆ.

ಎಂದಿನಂತೆ ಅಗತ್ಯ ವಸ್ತು ಪಡೆಯಲು ಶನಿವಾರ ಹಾಗೂ ರವಿವಾರಗಳಂದೂ ಕೂಡ ಅವಕಾಶ ಕಲ್ಪಿಸಲಾಗಿದೆ. ನಾಳೆ ದ.ಕ ಜಿಲ್ಲೆಯಲ್ಲಿ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿ ಇರೋದಿಲ್ಲ. ಈ ಬಗ್ಗೆ ನಿಯಮ ಬದಲಿಸಿ ಆದೇಶ ಹೊರಡಿಸಿರುವ ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಯವರು ಈಗಾಗಲೇ ಆದೇಶ ನೀಡಿದ್ದಾರೆ. ಬೆಳಗ್ಗೆ 6ರಿಂದ 9 ಗಂಟೆ ತನಕ ಅಗತ್ಯ ವಸ್ತು ಖರೀದಿ ಮಾಡಬಹುದಾಗಿದೆ. ಉಳಿದಂತೆ ಆರೋಗ್ಯ ಸೇವೆ ದಿನವಿಡಿ ಲಭ್ಯವಿರಲಿದೆ. ಆಹಾರ ಪಾರ್ಸೆಲ್ ಪಡೆಯುವುದಕ್ಕೂ ಕೂಡ ಅವಕಾಶವಿದೆ.
ನಾಳೆಯಿಂದ ಪೂರ್ವನಿಗಧಿತ ಮದುವೆ ಸಮಾರಂಭಗಳಿಗೆ ಅವಕಾಶ:
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ತೆಗೆದುಕೊಂಡ ನಿರ್ಣಯದಂತೆ ಮೇ 15 ರ ನಂತರ ಮದುವೆ ಸಮಾರಂಭಗಳನ್ನು ನಡೆಸಬಾರದೆಂದು ಜಿಲ್ಲೆಯ ಜನತೆಗೆ ವಿನಂತಿ ಮಾಡಲಾಗಿತ್ತು. ಆದರೆ ಈಗಾಗಲೇ ಮದುವೆಗೆ ದಿನ ನಿಗದಿಗೊಳಿಸಿದ್ದೇವೆ. ಎಲ್ಲಾ ಪೂರ್ವಸಿದ್ಧತೆ ಮಾಡಿಕೊಂಡಿದ್ದು, ನಿಲುವು ಪುನರ ವಿಮರ್ಶಿಸಲು ಸಾರ್ವಜನಿಕರಿಂದ ಬಂದ ಮನವಿಯ ಹಿನ್ನಲೆಯಲ್ಲಿ ಮೇ 15ರ ನಂತರವೂ ಮದುವೆ ಸಮಾರಂಭ ನಡೆಸಬಹುದೆಂದು ದ.ಕ. ಜಿಲ್ಲಾಡಳಿತ ಹೇಳಿದೆ. ಆದರೆ, 25 ಜನರಿಗೆ ಸೀಮಿತಗೊಳಿಸಿ ವಿವಾಹ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದೆ.