ಉಡುಪಿ, ಮೇ 15 (DaijiworldNews/MS): ಖೈದಿಗಳಿಗೆ ನೀಡುತ್ತಿರುವ ಸವಲತ್ತುಗಳನ್ನು ಉಡುಪಿ ಜೈಲು ಸೂಪರಿಡೆಂಟ್ ಶ್ರೀನಿವಾಸ ಗೌಡ ಅವರುದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಹಿರಿಯಡ್ಕದ ಕಾಜಾರಗುತ್ತುವಿನ ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳು ಉಪವಾಸ ಸತ್ಯಾಗ್ರಹ ನಡೆಸಿದ ಘಟನೆ ಮೇ.೧೫ ಶುಕ್ರವಾರ ನಡೆದಿದೆ.

ಸರಕಾರ ಖೈದಿಗಳಿಗೆ ನೀಡುತ್ತಿರುವರುವ ಸವಲತ್ತುಗಳನ್ನು ಅಲ್ಲಿನ ಸುಪರಿಡೆಂಟ್ ಶ್ರೀನಿವಾಸ್ ಸರಿಯಾಗಿ ಒದಗಿಸದಿರುವುದು ಖೈದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಆದ್ದರಿಂದ ಶುಕ್ರವಾರ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೇಂದು ಆಗ್ರಹಿಸಿ, ಖೈದಿಗಳು ಅನ್ನ ಆಹಾರ ಸ್ವೀಕರಿಸದೆ ಉಪವಾಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಜೈಲು ಸೂಪರಿಡೆಂಟ್ ಸೇರಿದಂತೆ ಇನ್ನೋರ್ವ ಸಿಬ್ಬಂದಿ ಕಟಾರಿ ಎಂಬಾತ ಸವಲತ್ತುಗಳನ್ನು ಕೊಡಬೇಕಾದರೆ ಕೈದಿಗಳಿಂದ ಲಂಚ ಸ್ವೀಕಾರಿಸುತ್ತಾರೆಂದು ಆರೋಪಿಸಿದ್ದಾರೆ. ಅಲ್ಲದೆ ಈ ಬಗ್ಗೆ ಶಾಸಕರು ಮತ್ತು ನ್ಯಾಯವಾದಿಗಳು ಜೈಲಿಗೆ ಬಂದು ಪರಿಶೀಲನೆ ನಡೆಸಬೇಕು ಎಂದು ಖೈದಿಗಳು ಆಗ್ರಹಿಸಿದ್ದಾರೆ.
ಜೈಲಿನಲ್ಲಿ ಅತ್ಯಂತ ಕಳಪೆ ಮಟ್ಟದ ಆಹಾರ ವಿತರಣೆ ನಡೆಯುತ್ತಿದ್ದು, ಕಾನೂನು ಪ್ರಕಾರ ವಾರಕ್ಕೊಮ್ಮೆ ಮೀನು, ಮಟನ್ ಕೊಡಬೇಕು. ಆದರೆ ಇಲ್ಲಿ ಅದ್ಯಾವುದೂ ಪಾಲನೆಯಾಗುತ್ತಿಲ್ಲ. ಕೈದಿಗಳಿಗೆ ಬರುವ ರೇಷನ್ ಜೈಲು ಸುಪರಿಡೆಂಟ್ ಮನೆ ಸೇರುತ್ತಿದೆ. ಪ್ರತಿಯೊಂದು ವಸ್ತುವಿಗೂ ಜೈಲು ಸೂಪರಿಡೆಂಟ್ ಶ್ರೀನಿವಾಸಗೌಡ ಲಂಚ ಕೇಳುತ್ತಾರೆ, ಖೈದಿಗಳಿಗೆ ಬರುವ ಸವಲತ್ತುಗಳಲ್ಲಿ ಭಾರಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಖೈದಿಗಳು ಎಲ್ಲಾ ಸೇರಿ ಜೈಲಿನ ಒಳಗೆ ಶ್ರೀನಿವಾಸ್ ಗೌಡ ಮಾಡುವ ಅವ್ಯವಹಾರದ ಬಗ್ಗೆ ಆತನ ವಿರುದ್ಧ ಆರೋಪ ಮಾಡಿ, ಉಡುಪಿಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದ್ದು ಮತ್ತು ನ್ಯಾಯಾಧೀಶರು ಮತ್ತು ಕಾಪು ಶಾಸಕ ಲಾಲಾಜಿ ಮೆಂಡನ್ ಬರುವ ವರಗೆ ಉಪವಾಸ ನಡೆದಿದೆ. ನಂತರ ಅವರ ಭರವಸೆಯ ನಂತರ ಉಪವಾಸ ಸತ್ಯಾಗ್ರಹ ಕೈ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.