ಮಂಗಳೂರು, ಮೇ 15 (DaijiworldNews/MS): ಅರಬ್ಬಿ ಸಮುದ್ರದ ಲಕ್ಷದೀಪದ ಬಳಿ ಉಂಟಾಗಿರುವ ವಾಯುಭಾರ ಕುಸಿತ ಬಲಗೊಂಡು ಚಂಡಮಾರುತವಾಗಿ ಪರಿವರ್ತನೆಯಾಗುತ್ತಿದೆ. ಇದು ಉತ್ತರಾಭಿಮುಖವಾಗಿ ಗುಜರಾತ್'ನ ಕರಾವಳಿ ತೀರದತ್ತ ಅಪ್ಪಳಿಸಲಿದೆ.





ಕರಾವಳಿಯಲ್ಲಿ ಇದರ ಪರಿಣಾಮ ಶನಿವಾರದಿಂದಲೇ ಮಳೆ ಸುರಿಯಲಾರಂಭಿಸಿದ್ದು ಜಿಲ್ಲಾಡಳಿತ ಅಗತ್ಯ ಮನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಹವಾಮಾನ ಇಲಾಖೆಯೂ ಕರಾವಳಿ ಭಾಗದಲ್ಲಿ 20ಸೆಂ.ಮೀ ಅಧಿಕ ಮಳೆ ಸುರಿಯಬಹುದು ಎಂದಿದೆ.
ವಾಯುಭಾರ ಕುಸಿತದ ಪರಿಣಾಮವಾಗಿ ಶುಕ್ರವಾರವೇ ಕಡಲು ಪ್ರಕ್ಷುಬ್ದಗೊಂಡಿದೆ. ಸಮುದ್ರದ ಭಾರಿ ಅಲೆಗಳು ಕಿನಾರೆಗೆ ಅಪ್ಪಳಿಸುತ್ತಿದೆ. ಸುರತ್ಕಲ್ ಉಳ್ಳಾಲದ ಸೋಮೇಶ್ವರ , ತಣ್ಣೀರುಬಾವಿ , ಪಣಂಬೂರು, ಕುಂದಾಪುರ ಬೈಂದೂರು ಕಡಲ ಕಿನಾರೆಯಲ್ಲಿ ದೈತ್ಯ ಅಲೆಗಳು ಅಪ್ಪಳಿಸಲಾರಂಭಿಸಿದೆ.
ಬೀಚ್ ಪ್ರದೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದ್ದು, ಮಂಗಳೂರಿಗೆ ಎನ್ ಡಿ ಆರ್ ಎಫ್ ತಂಡ ಆಗಮಿಸಿದೆ.