ಮಂಗಳೂರು, ಮೇ 15 (DaijiworldNews/MS): ದ.ಕ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ ಆಗಿ ಕೆಲಸಮಾಡುತ್ತಿರುವ 89 ಮಂದಿ ಪೊಲೀಸರಿಗೆ ಈ ಬಾರಿ ಕೊರೊನಾ ಸೋಂಕು ತಗುಲಿದ್ದು , ಇವರಲ್ಲಿ ಹೆಚ್ಚಿನವರು ಗುಣಮುಖರಾಗಿದ್ದಾರೆ . ಮತ್ತೆ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. 51 ವರ್ಷದ ಓರ್ವ ಸಿಬ್ಬಂದಿ ಮೃತಪಟ್ಟಿದ್ದಾರೆ.

ಆಯುಕ್ತರಿಂದ ಪೊಲೀಸ್ ಕೊವೀಡ್ ಕೇರ್ ಪರಿಶೀಲನೆ
ದ.ಕ. ಜಿಲ್ಲಾ ವ್ಯಾಪ್ತಿಯ 16 ಪೊಲೀಸರಿಗೆ ಸೋಂಕು ತಗುಲಿದ್ದರೂ ಅವರ ಕುಟುಂಬಸ್ಥರಿಗೆ ಅಷ್ಟಾಗಿ ಸೋಂಕು ತಗುಲಿರಲಿಲ್ಲ. ಆದರೆ ಈ ಬಾರಿ ಪೊಲೀಸರ ಕುಟುಂಬ ಸದಸ್ಯರ ಹಲವು ಮಂದಿಗೆ ಸೋಂಕು ತಗುಲಿದ್ದು ಅವರ್ ಅಸುರಕ್ಷತೆಗೂ ಹೆಚ್ಚಿನ ಹಮನ ನೀಡಲಾಗುತ್ತಿದೆ. ಇದೇ ಕಾರಣಕ್ಕಾಗಿ ಪೊಲೀಸ್ ಕೊವೀಡ್ ಕೇರ್ ಸೆಂಟರ್ ಆರಂಭಿಸಲಾಗಿದೆ.
ಕಮಿಷನರೆಟ್ ವ್ಯಾಪ್ತಿಯಲ್ಲಿ 1700 ಪೊಲೀಸರಿಗೆ 2 ನೇ ಡೋಸ್ ಕೂಡಾ ಶೇ. 95 ರಷ್ಟೂ ಪೂರ್ಣಗೊಂಡಿದೆ. ಹೆಚ್ಚಿನ ಪೊಲೀಸರಿಗೆ ಲಸಿಕೆ ನೀಡಿರುವುದರಿಂದ ಕೊರೊನಾದಿಂದ ಅಷ್ಟು ಆರೋಗ್ಯ ಹಾನಿ ಉಂಟಾಗದು ಎಂಬ ವಿಶ್ವಾಸವಿದೆ. ಪೊಲೀಸರು ದಿಅರ್ಯದಿಂದ ಕರ್ತವ್ಯ ನಿರ್ವಹಿಸಬಹುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.