ಕಾರ್ಕಳ, ಫೆ 05 (DaijiworldNews/HR): ಹೆಂಡದ ದಾಸ್ಯ ಸಂಕೋಲೆಗೊಳಗಾಗಿ ಹೆಂಡತಿಯನ್ನೇ ಬಿಟ್ಟು ಒಂಟಿಯಾಗಿ ಜೀವನ ನಡೆಸುತ್ತಿದ್ದ ಮಧ್ಯವಯಸ್ಕನೊಬ್ಬ ಮದ್ಯದಂಗಡಿಯ ಜಗುಲಿಯಲ್ಲಿ ಪ್ರಾಣಬಿಟ್ಟ ಘಟನೆ ಕೆರ್ವಾಶೆ ಪೇಟೆಯಲ್ಲಿ ನಡೆದಿದೆ.
ಹಮೀದ್ (53) ಘಟನೆಯಲ್ಲಿ ಮೃತ ಪಟ್ಟವರು.
ಸುಮಾರು 1 ವರ್ಷದಿಂದ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಒಬ್ಬಂಟಿಯಾಗಿ ಕೆರ್ವಾಶೆಯಲ್ಲಿ ಸುತ್ತ-ಮುತ್ತ ತಿರುಗಾಡುತ್ತಿದ್ದರು. ಆರು ತಿಂಗಳಿನಿಂದ ಮನೆಗೆ ಬಾರದೇ ಕೆರ್ವಾಶೆ ಪೇಟೆಯಲ್ಲಿಯೇ ವಿಪರೀತ ಸಾರಾಯಿ ಕುಡಿದು ಅಲ್ಲಿಯೇ ಪಕ್ಕದಲ್ಲಿದ್ದ ಹಳೆಯ ಶೇಂದಿ ಅಂಗಡಿಯ ವರಾಂಡದಲ್ಲಿ ಮಲಗುತ್ತಿದ್ದರು.
ವಿಪರೀತ ಸಾರಾಯಿ ಕುಡಿದು ಹಳೆ ಸೇಂದಿ ಅಂಗಡಿಯ ವರಾಂಡದಲ್ಲಿ ಮಲಗಿದ್ದು, ಹಸಿವು, ಬನಾಯಾರಿಕೆಯಿಂದ ಬಳಲಿ ಆಯಾಸಗೊಂಡು ಮಧ್ಯದ ಅವಧಿಯಲ್ಲಿ ಮೃತ ಪಟ್ಟಿದ್ದಾಗಿದೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಕೇಸುದಾಖಲಾಗಿದೆ.