ಸುಳ್ಯ, ಅ 12 (DaijiworldNews/DB): 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.

ಕೇರಳದ ವಯನಾಡು ಜಿಲ್ಲೆಯ ಕಲ್ಲಪತ್ತ ವೈತ್ರಿ ನಿವಾಸಿ ಕೆ.ಎಂ. ಸಿದ್ದಿಕ್ ಬಂಧಿತ ಆರೋಪಿ. ಸಿಸಿ 1338/2003ನಡಿ ಐಪಿಸಿ ಸೆಕ್ಷನ್ 457 ಮತ್ತು 380ನಡಿ ಈತ ಪೊಲೀಸರಿಗೆ ಬೇಕಾದವನಾಗಿದ್ದ. ಆರೋಪಿ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಆತನ ಬಂಧನಕ್ಕಾಗಿ ವಾರೆಂಟ್ ಜಾರಿಗೊಳಿಸಲಾಗಿತ್ತು.
ಇದೀಗ ಅಕ್ಟೋಬರ್ 11ರಂದು ಆತನನ್ನು ದಸ್ತಗಿರಿ ಮಾಡಲಾಗಿದ್ದು, ಎಸ್ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ನೀಡಿದ್ದು ನ್ಯಾಯಲಯದ ಆದೇಶದಂತೆ ಮಂಗಳೂರು ಜಿಲ್ಲಾ ಕಾರಗೃಹಕ್ಕೆ ಹಾಜರು ಪಡಿಸಲಾಗಿದೆ ಎಂದು ಪೊಲೀಸ್ ಠಾಣೆಯ ಮಾಹಿತಿ ತಿಳಿಸಿದೆ.