ಕಾಸರಗೋಡು, ಅ 16 (Daijiworldnews/HR): ಈರುಳ್ಳಿ ತುಂಬಿದ್ದ ಗೋಣಿ ಚೀಲದಡಿ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ನಿಷೇಧಿತ ಪಾನ್ ಮಸಾಲ ಉತ್ಪನ್ನಗಳನ್ನು ವಶಪಡಿಸಿಕೊಂಡಿರುವ ಕಾಸರಗೋಡು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.



ಮಲಪ್ಪುರಂನ ಉದಯಚಂದ್ರ ಮತ್ತು ಅಬ್ದುಲ್ ಲತೀಫ್ ಬಂಧಿತರು.
ಪಿಕಪ್ ವ್ಯಾನ್ನಲ್ಲಿ ಈರುಳ್ಳಿ ಹೇರಿಕೊಂಡು ತೆರಳುತ್ತಿದ್ದ ಸಂದರ್ಭದಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ ಸಾಗಾಟ ಪತ್ತೆಯಾಗಿದೆ.
ಪ್ಲಾಸ್ಟಿಕ್ ಚೀಲಗಳಲ್ಲಿ ಈರುಳ್ಳಿ ತುಂಬಿದ್ದ ಗೋಣಿಗಳ ಮಧ್ಯೆ ಬಚ್ಚಿಟ್ಟು ಸಾಗಾಟ ಮಾಡಲಾಗುತ್ತಿತ್ತು. ಸುಮಾರು 60 ಸಾವಿರ ಪ್ಯಾಕೆಟ್ಗಳಷ್ಟು ಪಾನ್ ಮಸಾಲ ಪ್ಯಾಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು ಮೌಲ್ಯ 24 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.