ಬೆಂಗಳೂರು, ಜ.16 (DaijiworldNews/AA): ಡಿಕೆಶಿ ಒಬ್ಬಂಟಿ, ಈಗ ಅವರ ಪರ ಯಾರೂ ಇಲ್ಲ. ಹೀಗಾಗಿ ಅವರಿಗೆ ಹೈಕಮಾಂಡ್ ಪಾದವೇ ಗತಿ ಅಂತ ಡಿಕೆಶಿ ಕೂತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಅವರು, ಸಿಎಂ ಸ್ಥಾನದಲ್ಲಿ ತಾವೇ ಮುಂದುವರೆಯಲು ಸಿದ್ದರಾಮಯ್ಯ ಸ್ಟ್ರಾಟಜಿ ಮಾಡ್ತಿದ್ದಾರೆ. ಡಿಕೆಶಿ ಒಬ್ಬಂಟಿಗರಾಗಿದ್ದಾರೆ ಎಂದರು.
ಕಾಂಗ್ರೆಸ್ನಲ್ಲಿ ಆಗಿರುವ ಎರಡೂವರೆ ವರ್ಷದ ಅಧಿಕಾರ ಹಸ್ತಾಂತರಕ್ಕೆ ಸಿದ್ದರಾಮಯ್ಯ ಮನಸು ಮಾಡ್ತಿಲ್ಲ. ತಾವೇ ಮುಂದುವರೆಯಲು ಸ್ಟ್ರಾಟಜಿ ಮಾಡಿದ್ದಾರೆ. ಅದಕ್ಕಾಗಿ ಆಪ್ತರನ್ನು ಛೂ ಬಿಟ್ಟಿದ್ದಾರೆ. ಪರಮೇಶ್ವರ್, ಜಾರಕಿಹೊಳಿ, ರಾಜಣ್ಣ, ಮಹಾದೇವಪ್ಪ ಎಲ್ಲರೂ ಫೀಲ್ಡಿಗಿಳಿದು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡ್ತಿದ್ದಾರೆ ಎಂದು ತಿಳಿಸಿದರು.