ನವದೆಹಲಿ,ಜ.30 (DaijiworldNews/AK): ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಮನೆಯ ಮುಂದೆ ಲೋಡ್ಗಟ್ಟಲೆ ಕಸ ಸುರಿದ ಹಿನ್ನೆಲೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿ ಪೊಲೀಸರು ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಸ್ವಾತಿ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಮನೆಯ ಹೊರಗೆ ಕಸ ಸುರಿಯುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದರು.
ಸ್ವಾತಿ ಮಲಿವಾಲ್ ಅವರು ಕಸದ ಗಾಡಿಯ ಜೊತೆ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮುಂದೆ ಬಂದು ಕಸ ಸುರಿಯಲು ಪ್ರಾರಂಭಿಸಿದರು. ಅವರ ಬೆಂಬಲಿಗರು ಕೈಯಲ್ಲಿ ‘ದೆಹಲಿಯಿಂದ ಕಸ ತೆಗೆದುಹಾಕಿ’ ಎಂಬ ಘೋಷಣೆಗಳನ್ನು ಬರೆದ ಫಲಕಗಳನ್ನು ಹಿಡಿದಿದ್ದರು. ಸ್ವಾತಿ ಮಲಿವಾಲ್ ಮೂರು ವಾಹನಗಳಲ್ಲಿ ಕಸ ತುಂಬಿಸಿ ಎಎಪಿ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಅವರ ಮನೆಯ ಹೊರಗೆ ಹಾಕಿದ್ದರು.