ಶಿವಮೊಗ್ಗ, ಆ. 6 (DaijiworldNews/AK):ಕುಂದಾಪುರ ತಾಲೂಕಿನ ಬಾಳೆಬರೆ ಘಾಟ್ನಲ್ಲಿ ರಸ್ತೆ ಕುಸಿತದ ಹಿನ್ನೆಲೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಘಾಟ್ ಕೆಲವು ದಿನಗಳ ಹಿಂದೆ ರಸ್ತೆ ಕುಸಿತವಾಗಿತ್ತು. ಇದರಿಂದ ಭಾರೀ ವಾಹನಗಳ ಸಂಚಾರಕ್ಕೆ ಅಪಾಯಕಾರಿಯಾಗಿದೆ. ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿಯ ಮಾಸ್ತಿಕಟ್ಟೆಯಿಂದ ಹೊಸಂಗಡಿವರೆಗೆ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಪರ್ಯಾಯ ಮಾರ್ಗವಾಗಿ ವಾಹನಗಳು ತೀರ್ಥಹಳ್ಳಿ - ರಾವೆ - ಕಾನುಗೋಡು - ನಾಗರಾಳ - ಕೊಲ್ಲೂರು - ಕುಂದಾಪುರ ರಸ್ತೆ, ತೀರ್ಥಹಳ್ಳಿ - ಯಡೂರು - ಮಾಸ್ತಿಕಟ್ಟೆ - ಕಾನುಗೋಡು - ನಗರ - ಕೊಲ್ಲೂರು - ಕುಂದಾಪುರ ಅಥವಾ ಶಿವಮೊಗ್ಗ - ಹೊನ್ನಾವರ ಹೆದ್ದಾರಿ - ಭಟ್ಕಳ - ಬೈಂದೂರು - ಕುಂದಾಪುರ ಮಾರ್ಗವನ್ನು ಬಳಸಬಹುದು.